ತುಮಕೂರು ನಗರದ ಜಯಪುರದಲ್ಲಿ ಕರ್ನಾಟಕ ಭೀಮಸೇನ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮತ್ತು ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕ ಶಾಖೆಗಳ ಉದ್ಘಾಟನೆ

ತುಮಕೂರು ನಗರದ ಜಯಪುರದಲ್ಲಿ ಕರ್ನಾಟಕ ಭೀಮಸೇನ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮತ್ತು ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕ ಶಾಖೆಗಳ ಉದ್ಘಾಟನೆ ಹಾಗೂ ಕರ್ನಾಟಕ ಭೀಮಸೇನೆ ಕಪ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟ್ರೋಫಿ ಟೂರ್ನಮೆಂಟ್ ಕಾರ್ಯಕ್ರಮವನ್ನು ದಿನಾಂಕ ಮಾರ್ಚ್ 7 -8 ರಂದು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ತುಮಕೂರು ಜನಪ್ರಿಯ ಶಾಸಕರಾದ ಜ್ಯೋತಿ ಗಣೇಶ್ ರವರು ಪುಷ್ಪಾರ್ಚನೆ ಹಾಗೂ ದೀಪ ಹಚ್ಚಿ ಕ್ರಿಕೆಟ್ ಆಡುವುದರ ಮೂಲಕ ಟೂರ್ನಿಮೆಂಟ್ ಗೆ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ದಾಸಪ್ಪ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ವಕೀಲರಾದ ನಾಗೇಶ್ ಶಿವಾಜಿ ಹಾಗೂ ಕರ್ನಾಟಕ ಭೀಮಸೇನೆಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ಜೈ ಭೀಮ್ ಬಂಧುಗಳೇ ದಿನಾಂಕ: 7 ಮತ್ತು 8 ಮಾರ್ಚ್ ಶನಿವಾರ ಭಾನುವಾರ ದಿನ ತುಮಕೂರು ನಗರದಲ್ಲಿ ಸ್ಥಳ:: ಜೈಪುರ. (ಜಯಪುರ) ತುಮಕೂರು ಇಲ್ಲಿ. ಕರ್ನಾಟಕ ಭೀಮ್ ಸೇನೆ. 4ನೇ ವರ್ಷದ ವಾರ್ಷಿಕೋತ್ಸವ ಮತ್ತು ತುಮಕೂರು ನಗರ, ಮತ್ತು ತುಮಕೂರು ಗ್ರಾಮಾಂತರ, ಮತ್ತು ತುಮಕೂರು ಜಿಲ್ಲಾ ಮಹಿಳಾ ಘಟಕ, ಶಾಖೆಗಳ ಉದ್ಘಾಟನೆ ಸಮಾರಂಭ ಮತ್ತು ಕರ್ನಾಟಕ ಭೀಮ್ ಸೇನೆ ಕಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟ್ರೋಫಿ ಟೂರ್ನಮೆಂಟ್ ಕ್ರಿಕೆಟ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆದ್ದರಿಂದ ಕರ್ನಾಟಕ ಭೀಮ್ ಸೇನೆಯ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಕರ್ನಾಟಕ ಭೀಮ್ ಸೇನೆ ಎಲ್ಲಾ ಪದಾಧಿಕಾರಿಗಳು, ಮತ್ತು ಕರ್ನಾಟಕದ ಎಲ್ಲಾ ಕರ್ನಾಟಕ ಭೀಮ್ ಸೇನೆಯ ಎಲ್ಲಾ ಜಿಲ್ಲಾ ಅಧ್ಯಕ್ಷರು ತಾಲೂಕ್ ಅಧ್ಯಕ್ಷರು ಹೋಬಳಿ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ದಲಿತ ಪರ ಚಿಂತಕರು ಮಹಿಳೆಯರು ತಾಯಂದಿರು ಮತ್ತು ದಲಿತಪರ ಹೋರಾಟಗಾರರು, ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಜೈ ಭೀಮ್ ಆಹ್ವಾನಿಸಲಾಗಿದೆ. ಎನ್. ದಾಸಪ್ಪ. ಜಿಲ್ಲಾಧ್ಯಕ್ಷರು.ಕರ್ನಾಟಕ ಭೀಮ್ ಸೇನೆ ತುಮಕೂರು ಜಿಲ್ಲೆ.

