_ವೈದ್ಯರಿಗೆ ಶುಭಾಶಯ ಕೋರಿದ ರಂಜಿತಾ ಸುನೀಲ್ ಕುಮಾರ್__ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಇಂದು ನಗರಪಾಲಿಕೆ ಮಾಜಿ ಸದಸ್ಯರಾದ ದಿ ಎನ್ ಸುನೀಲ್ ಕುಮಾರ್ ಅವರ ಶ್ರೀಮತಿ ರಂಜಿತಾ ಸುನೀಲ್ ಕುಮಾರ್ ಅವರು ಯುವ ಮುಖಂಡರುಗಳಾದ ತೇಜಸ್ವಿ ನಾಗಲಿಂಗಸ್ವಾಮಿ ಮತ್ತು ಆತ್ಮೀಯ ಶ್ರೀಧರ್ ಜೀ ಅವರ ಜೊತೆಗೂಡಿ ವಾರ್ಡ್ ಸಂಖ್ಯೆ 51 ಅಗ್ರಹಾರ ದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮಣ್ಣೀ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯಾಧಿಕಾರಿಗಳಿಗೆ ಗಿಡ ನೀಡುವ ಮೂಲಕ ಶುಭಾಶಯಗಳನ್ನು ತಿಳಿಸಿದರು_

_ವೈದ್ಯರಿಗೆ ಶುಭಾಶಯ ಕೋರಿದ ರಂಜಿತಾ ಸುನೀಲ್ ಕುಮಾರ್__ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಇಂದು ನಗರಪಾಲಿಕೆ ಮಾಜಿ ಸದಸ್ಯರಾದ ದಿ ಎನ್ ಸುನೀಲ್ ಕುಮಾರ್ ಅವರ ಶ್ರೀಮತಿ ರಂಜಿತಾ ಸುನೀಲ್ ಕುಮಾರ್ ಅವರು ಯುವ ಮುಖಂಡರುಗಳಾದ ತೇಜಸ್ವಿ ನಾಗಲಿಂಗಸ್ವಾಮಿ ಮತ್ತು ಆತ್ಮೀಯ ಶ್ರೀಧರ್ ಜೀ ಅವರ ಜೊತೆಗೂಡಿ ವಾರ್ಡ್ ಸಂಖ್ಯೆ 51 ಅಗ್ರಹಾರ ದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮಣ್ಣೀ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯಾಧಿಕಾರಿಗಳಿಗೆ ಗಿಡ ನೀಡುವ ಮೂಲಕ ಶುಭಾಶಯಗಳನ್ನು ತಿಳಿಸಿದರು_ _ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡರಾದ ತೇಜಸ್ವಿ ನಾಗಲಿಂಗಸ್ವಾಮಿ_ _ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯವೈದ್ಯ ರ ದಿನವನ್ನ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಆಚರಿಸಲಾಗುತ್ತದೆ ಎಂದರು__ಭಾರತದಲ್ಲಿ ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿ ಮತ್ತು ವೈದ್ಯ ಡಾ. ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥ 1991 ಜುಲೈ 1 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದರು ಮತ್ತು ನಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಈ ಆಸ್ಪತ್ರೆಯ ವೈದ್ಯಾಧಿಕಾರಿಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಿಮಗೆ ಧನ್ಯವಾದಗಳನ್ನು ತಿಳಿಸಿ ಈ ಆಸ್ಪತ್ರೆಯ ಅಭಿವೃದ್ಧಿ ಕುರಿತು ಸದಾ ನಿಮ್ಮೊಂದಿಗೆ ಇರುತ್ತವೆ ಎಂದರು_

ಭವಿಷ್ಯದ ದೃಷ್ಟಿಯಲ್ಲಿ ಸ್ಲಂ ಮಕ್ಕಳು ವಿದ್ಯಾವಂತರಾಗಬೇಕು*ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಜಿ. ಬಿ. ಜ್ಯೋತಿಗಣೇಶ್ ಕರೆಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ ಭವನದಲ್ಲಿ 24ನೇ ವರ್ಷದ ಸ್ಲಂ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ ಜ್ಯೋತಿಗಣೇಶ್ ಉದ್ಘಟಿಸಿ ಮಾತನಾಡಿದರು

*ಭವಿಷ್ಯದ ದೃಷ್ಟಿಯಲ್ಲಿ ಸ್ಲಂ ಮಕ್ಕಳು ವಿದ್ಯಾವಂತರಾಗಬೇಕು**ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಜಿ. ಬಿ. ಜ್ಯೋತಿಗಣೇಶ್ ಕರೆ*ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ ಭವನದಲ್ಲಿ 24ನೇ ವರ್ಷದ ಸ್ಲಂ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ ಜ್ಯೋತಿಗಣೇಶ್ ಉದ್ಘಟಿಸಿ ಮಾತನಾಡಿದರು.ಕೊಳಚೆ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಕಷ್ಠದ ಪರಿಸ್ಥಿತಿಗಳಲ್ಲಿ ಪೋಷಕರು ತಮ್ಮ ಮಕ್ಕಳ ಓದನ್ನು ತಮ್ಮಗೆ ತೊಂದರೆಯಿದ್ದರೂ ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಕಳೆದ 24 ವರ್ಷಗಳಿಂದ ತುಮಕೂರು ಸ್ಲಂ ಸಮಿತಿ ಜಾತ್ಯಾತೀತವಾಗಿ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುತ್ತ ಬಂದಿರುವುದು ಅಭಿನಂದನೀಯವಾಗಿದೆ. ಭವಿಷ್ಯದಲ್ಲಿ ಮಕ್ಕಳು ಯಾರು ಯಾರು ಏನೇನಾಗುತ್ತಾರೋ ಗೊತ್ತಿಲ್ಲ ಹಾಗಾಗಿ ಸ್ಲಂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ವಿದ್ಯಾವಂತರಾಗಿ ಕಷ್ಠದಿಂದ ಸುಖದ ದಾರಿಗೆ ಬರಬೇಕು. ಇಂದು ಶಿಕ್ಷಣ ದುಬಾರಿಯಾಗಿದೆ ಆದರೂ ಸರ್ಕಾರಿ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಸ್ಲಂನಲ್ಲಿರುವ ಪ್ರತಿಭಾವಂತರು ಮುಂದೆ ಬರಬೇಕೆಂದರು. ಸ್ಲಂ ಎಂದು ಕರೆಯುವುದನ್ನು ನಿಲ್ಲಿಸಬೇಕು ಇದಕ್ಕಾಗಿ ಸರ್ಕಾರ ಪರ್ಯಾಯ ಪದವನ್ನು ನಾಮಕರಣ ಮಾಡಬೇಕೆಂದು ಸದನದಲ್ಲಿ ಒತಾಯಿಸುತ್ತೇನೆ ಎಂದರು.ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿವೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಇಲ್ಲದವರಿಗೆ ವಸತಿ ಕಲ್ಪಿಸಲು ಮುಂದಾಗಿದ್ದೇವೆ. ಸ್ಲಂ ನಿವಾಸಿಗಳಿಗೆ ನೀಡುವ ವಸತಿ ಸಮುಚ್ಚಯಗಳು 200 ರಿಂದ 500 ವಸತಿ ಸಮುಚ್ಚಯಗಳಾಗಿದ್ದಲ್ಲಿ ಎಲ್ಲಾ ರೀತಿಯ ಸೌಲಭ್ಯ ಕೊಡಲು ಸಾಧ್ಯ ಈ ಹಿಂದೆ ದಿಬ್ಬೂರಿನಲ್ಲಿ 1200 ಮನೆಗಳನ್ನು ನೀಡಿರುವುದು ವೈಜ್ಞಾನಿಕವಾಗಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ತುಮಕೂರು ಸೇರಿದಂತೆ ಇತರೆ ನಗರಗಳಲ್ಲಿ ಸ್ಲಂ ಜನರನ್ನು ಅಥವಾ ನಿವೇಶನ ರಹಿತರನ್ನು ಪುನರ್ವಸತಿಗೊಳಿಸಬೇಕಾದಲ್ಲಿ ಕನಿಷ್ಠ ಕುಟುಂಬಗಳನ್ನಷ್ಟೇ ಪರಿಗಣಿಸಬೇಕು. ಸ್ಲಂ ಸಮಿತಿ ನಿವೇಶನ ರಹಿತರ 31 ಒಂಟಿ ಮಹಿಳೆ ನಿವೇಶನ ರಹಿತರಿಗೆ ಹೊನ್ನೇನಹಳ್ಳಿಯ 192 ವಸತಿ ಸಮುಚ್ಚಯಗಳಲ್ಲಿ ಅನರ್ಹ ಪಲಾನುಭವಿಗಳನ್ನು ತೆಗೆದು ಆಧ್ಯತೆ ಮೇಲೆ ಸೇರಿಸುವುದಾಗಿ ತಿಳಿಸಿದರು. *ಈ ದೇಶ ಇಲ್ಲದವರು ಮತ್ತು ಇರುವವರ ಸಂಘರ್ಷವಾಗಿದೆ-* *ಇಲ್ಲದ ಸ್ಲಂ ಸಮುದಾಯ ಮಾದರಿಯಾಗಬೇಕು* – *ಡಾ.ಎನ್ ತಿಪ್ಪೇಸ್ವಾಮಿ* ವಿವಿಧ ಸ್ಲಂಗಳ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ 96% ನಿಂದ 60% ವರೆಗೂ ಅತ್ಯುತ್ತಮ ಅಂಕ ಗಳಿಸಿದ 65 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಡಾ.ಎನ್.ತಿಪ್ಪೇಸ್ವಾಮಿ ಈ ದೇಶ ಇಲ್ಲದವರು ಮತ್ತು ಇರುವವರ ಸಂಘರ್ಷವಾಗಿದೆ ಇಲ್ಲದಿರುವಿಕೆಯೆ ಬಡತನಕ್ಕೆ ಸಾಕ್ಷಿ ಇದು ಜಾತಿ ವ್ಯವಸ್ಥೆಗೆ ಮುಖ್ಯ ಕಾರಣವಾಗಿದೆ. ಸ್ಲಂಗಳಲ್ಲಿ ಬದುಕಬೇಕೆಂಬ ಕಾರಣ ಅನಿವಾರ್ಯವಾಗಿ ಬದುಕನ್ನು ಕಟ್ಟುತ್ತಿದೆ. ಭಾರತದ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳ ಹಿಂದೆಯೇ ಇಂತಹವರು ಹೀಗೆ ಇರಬೇಕೆಂಬ ಕಟ್ಟುಪಾಡುಗಳನ್ನು ಹೇರಲಾಗಿದೆ. ನಗರಗಳಲ್ಲಿ ಅನಿವಾರ್ಯ ಪರಿಸ್ಥಿತಿಯಿಂದ ಸ್ಲಂಗಳಲ್ಲಿ ಕೆಳಜಾತಿ ಜನರು ಜೀವಿಸುತ್ತಿದ್ದು ಇಲ್ಲಿ ಪ್ರತಿಭಾವಂತರು ಇದ್ದಾರೆ. ಇಂತಹ ಪ್ರತಿಭಾವಂತರಿಗೆ ನಾನು ಎಂಬ ಅಹಂ ಬಂದರೆ ನಾವು ನಾಶವಾಗುತ್ತೇವೆ. ಇದು ಮುಂದಿನ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಹಸಿದವನು ಇಂದು ಎಲ್ಲಾ ಹಂತದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಸಮಾಜ ಬದಲಾವಣೆಯಾಗಬೇಕಂದರೆ ಶಿಕ್ಷಣ ಒಂದೇ ಮಾರ್ಗವಾಗಿದೆ. ಹಸಿವನ್ನು ಹತ್ತಿರದಿಂದ ನೋಡಿದವರು ಜಯಶಾಲಿಗಳಾಗುತ್ತಾರೆ. ಜ್ಞಾನದ ಹಸಿವಿದ್ದವರು ದೇಶವನ್ನು ಆಳುತ್ತಾರೆ ಪ್ರತಿಭೆ ಯಾರ ಸ್ವತ್ತಲ್ಲ ಜೀವನದ ದಾರಿಯ ತಿರುವನ್ನು ನಾವು ಮುಟ್ಟಬೇಕಾದರೆ ನಾನು ಯಾರು ಎಂಬ ಪ್ರಶ್ನೆ ಹಾಕಿಕೊಂಡಾಗ ಮಾತ್ರ ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಬೆಳಕಾಗಬಹುದು ನಮ್ಮ ಪ್ರತಿಭೆ ಮೇಲ್ಮುಖವಾಗಿ ಚಲನೆಯಾಗಬೇಕು ಹಾಗಾಗಿ ನಾವು ಕನಸ್ಸು ಕಾಣಬೇಕು. ನೊಂದವರು ಶೋಷಿತರು ಭವಿಷ್ಯದಲ್ಲಿ ಸಮಾಜದ ಕಣ್ಣುಗಳಾಗಬೇಕೆಂದರು.ಚರಕ ಆಸ್ಪತ್ರೆಯ ಡಾ. ಬಸವರಾಜು ಮಾತನಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯದಕ್ಕಿಂತ ಕೆಟ್ಟದ್ದು ಬೇಗ ಆಕರ್ಷಿಣೀಯವಾಗಿರುತ್ತದೆ. ಮೌಢ್ಯವನ್ನು ಪ್ರಶ್ನಿಸಿದರೆ ವೈಚಾರಿಕಾವಾಗಿ ನಾವು ಬೆಳೆಯಬಹುದು ನಮ್ಮಲ್ಲಿರುವ ಕೀಳರಿಮೆ ಹೋಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಚಿಂತಕರಾದ ಕೆ.ದೊರೈರಾಜು ಜಗತ್ತಿನಲ್ಲಿರುವ ಎಲ್ಲಾ ಪ್ರತಿಭಾವಂತರು ಶೋಷಣೆ ಮತ್ತು ದುಡಿಯುವ ಸಮುದಾಯದಿಂದ ಬಂದವರಾಗಿರುತ್ತಾರೆ. ಸ್ಲಂಗಳಲ್ಲಿ ಹೆಣ್ಣು ಮಕ್ಕಳು ಓದುವ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಸ್ಲಂ ವಿದ್ಯಾರ್ಥಿಗಳು ಮುಂದಾಗಬೇಕು ಇದಕ್ಕೆ ಪೋಷಕರು ಸಹಕಾರ ನೀಡಬೇಕು ಸಮಸ್ಯೆಗಳೇ ನಮ್ಮನ್ನು ಸಂಘಟಿತರಾಗಿ ಮಾಡುತ್ತವೆ ಎಂದರು.ಆಶಯ ನುಡಿ ಮಾತನಾಡಿದ ಎ.ನರಸಿಂಹಮೂರ್ತಿ ಕಳೆದ 24 ವರ್ಷಗಳಲ್ಲಿ ಈ ಪ್ರತಿಭಾಪುರಸ್ಕಾರ ಸ್ಲಂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಜ್ಞೆಯನ್ನು ನಿರ್ಮಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಭಾನುಪ್ರತಾಪ್ ಸಿಂಹ, ತುಮಕೂರು ವಿ.ವಿ ಶೇಖರ್ , ಮಾಜಿ ನಗರಸಭೆ ಸದಸ್ಯರುಗಳಾದ ಎ.ಶ್ರೀನಿವಾಸ್, ಲಕ್ಷ್ಮೀ ನರಸಿಂಹರಾಜು, ಸ್ಲಂ ಸಮಿತಿ ಗೌರವಧ್ಯಕ್ಷರಾದ ದೀಪಿಕಾ, ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ, ತುಮಕೂರು ನಗರ ಠಾಣೆಯ ರಾಮಚಂದ್ರಯ್ಯ, ಮಂಜಣ್ಣ, ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಟಿ.ಜಿ ಸ್ವಾಗತವನ್ನು ತಿರುಮಲಯ್ಯ, ವಂದನಾರ್ಪಣೆಯನ್ನು ಅನುಪಮಾ ನೆರವೇರಿಸಿದರು ತುಮಕೂರು ಸ್ಲಂ ಸಮಿತಿಯ ಪದಾದಿಕಾರಿಗಳು ಉಪಸ್ಥಿತರಿದ್ದರು.

ತುಮಕೂರು: ವೀರಸೌಧದಲ್ಲಿ ಕಾನೂನು ಸೇವಾ ಕೇಂದ್ರ ಉದ್ಘಾಟನೆ – ಯೋಧರು ಹಾಗೂ ಕುಟುಂಬಗಳಿಗೆ ಕಾನೂನು ಅರಿವು ಕಾರ್ಯಕ್ರಮತುಮಕೂರು ನಗರದ ಜೆ.ಸಿ. ರಸ್ತೆಯಲ್ಲಿರುವ ವೀರಸೌಧ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲಾ ಸೈನಿಕರು, ಮಾಜಿ ಯೋಧರು ಮತ್ತು ಅವಲಂಬಿತರ ಸಮಿತಿಯ ಸಹಯೋಗದಲ್ಲಿ ಕಾನೂನು ಸೇವಾ ಕೇಂದ್ರದ ಉದ್ಘಾಟನೆ

ತುಮಕೂರು: ವೀರಸೌಧದಲ್ಲಿ ಕಾನೂನು ಸೇವಾ ಕೇಂದ್ರ ಉದ್ಘಾಟನೆ – ಯೋಧರು ಹಾಗೂ ಕುಟುಂಬಗಳಿಗೆ ಕಾನೂನು ಅರಿವು ಕಾರ್ಯಕ್ರಮತುಮಕೂರು ನಗರದ ಜೆ.ಸಿ. ರಸ್ತೆಯಲ್ಲಿರುವ ವೀರಸೌಧ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲಾ ಸೈನಿಕರು, ಮಾಜಿ ಯೋಧರು ಮತ್ತು ಅವಲಂಬಿತರ ಸಮಿತಿಯ ಸಹಯೋಗದಲ್ಲಿ ಕಾನೂನು ಸೇವಾ ಕೇಂದ್ರದ ಉದ್ಘಾಟನೆ ಹಾಗೂ ವೀರ ಪರಿವಾರ ಸಹಾಯತ ಯೋಜನೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಲೋಕೇಶ ಧನಪಾಲ ಹವಲೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಧರು, ಮಾಜಿ ಯೋಧರು ಹಾಗೂ ಅವರ ಕುಟುಂಬದ ಅವಲಂಬಿತರಿಗೆ ಲಭ್ಯವಿರುವ ಕಾನೂನು ಸೇವೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಮಾತನಾಡಿ, ದೇಶದ ಗಡಿಯನ್ನು ಹಗಲು-ರಾತ್ರಿ, ಮಳೆ-ಚಳಿ ಎನ್ನದೆ ರಕ್ಷಿಸುವ ಸೈನಿಕರ ಸೇವೆ ಅಪಾರವಾಗಿದೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಯೂ ಸೈನಿಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಯೋಧರು ಮತ್ತು ಅವರ ಕುಟುಂಬಗಳಿಗೆ ಕಾನೂನು ಅರಿವು ಹಾಗೂ ಕಾನೂನು ಸೌಲಭ್ಯಗಳನ್ನು ಒದಗಿಸುವುದು ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ 4 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್ ಉಪ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಎಸ್. ಅಭಿಲಾಷ್, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಚಂದ್ರ ಎನ್.ಆರ್., ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಮೇಜರ್ ಬಾಲಸುಬ್ರಹ್ಮಣ್ಯಂ, ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿ ಅಧ್ಯಕ್ಷ ಬೊಮ್ಮಲಿಂಗಣ್ಣ, ಕಾರ್ಯದರ್ಶಿ ವಿ.ಡಿ. ನಾಗರಾಜ್, ಡಾ. ಹಿರೇಮಠ್, ಕರ್ನಲ್ ಗಿರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ವರದಿ: ಉದಯಕುಮಾರ್ಕಲ್ಪತರು ನ್ಯೂಸ್, ತುಮಕೂರು

ತುಮಕೂರು ನಗರ ಮಂಡಿಪೇಟೆಯ ಮಾರಿಯಮ್ಮ ನಗರದ ಶ್ರೀ ಮಾರಿಯಮ್ಮ ದೇವಿಯ ಜಾತ್ರಾ ಕರಗ ಮಹೋತ್ಸವಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ಚಾಲನೆ ನೀಡಿದರು

ಶ್ರೀ ಮಾರಿಯಮ್ಮ ದೇವಿ ಜಾತ್ರೆ ಡಿ.ಸಿ ಶುಭ ಕಲ್ಯಾಣ್ ಚಾಲನೆ

ತುಮಕೂರು ನಗರ ಮಂಡಿಪೇಟೆಯ ಮಾರಿಯಮ್ಮ ನಗರದ ಶ್ರೀ ಮಾರಿಯಮ್ಮ ದೇವಿಯ ಜಾತ್ರಾ ಕರಗ ಮಹೋತ್ಸವಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ಚಾಲನೆ ನೀಡಿದರು.

ಶ್ರಮ ಜೀವಿಗಳು ವಾಸಿಸುವ ಮಾರಿಯಮ್ಮ ನಗರದಲ್ಲಿ ತುಮಕೂರು ಮಂಡಿಪೇಟೆ ಹಾಗೂ ತರಕಾರಿ ಮಾರುಕಟ್ಟೆಯಗೆ ಮಾನವ ಸಂಪತ್ತನ್ನು ಹೊಂದಿರುವ ಯುವ ಸಮೂಹದ ದೊಡ್ಡ ದಂಡೆ ಇಲ್ಲಿದ್ದು ನಿರಂತರವಾಗಿ ತುಮಕೂರು ಸ್ಲಂ ಸಮಿತಿಯ ಜೊತೆ ಬಾಬಾ ಸಾಹೇಬ್ ಅಂಬೇಡ್ಕರ್ರವರು ಹಾಕಿಕೊಟ್ಟ ಹೋರಾಟದ ಹಾದಿಯಲ್ಲಿ ಸಾಗುವ ಇಲ್ಲಿನ ಜನರು ಸ್ವಾವಲಂಬಿಯಾಗಿ ಸ್ವಂತ ವ್ಯಾಪಾರ ಹಾಗೂ ಏಜೆನ್ಸಿಗಳ ಮಾಲಿಕರಾಗಿ ಆರ್ಥಿಕವಾಗಿ ಸಬಲರಾಗಿರುವುದು ವಿಶೇಷವಾಗಿದೆ, ಇದೇ ತುಮಕೂರು ನಗರಕ್ಕೆ ಊರ ಮಾರಮ್ಮನ ಜಾತ್ರೆಯನ್ನು ಅದ್ಧೂರಿಯಾಗಿ ವರ್ಷಕ್ಕೊಮ್ಮೆ ಮಾಡಲಾಗುತ್ತದೆ, ಈ ಸಂದರ್ಭದಲ್ಲಿ ಮಾರಿಯಮ್ಮ ಯುವಕರ ಸಂಘ, ಯುವ ಭೀಮ ಪಡೆ ಪದಾಧಿಕಾರಿಗಳು 15 ದಿನ ರಜೆ ಮಾಡಿ ಶಿಸ್ತು ಬದ್ದವಾಗಿ ಜಾತ್ರೆಯನ್ನು ನಡೆಸುವರು ಇದಕ್ಕೆ ಬೆಂಬಲವಾಗಿ ತುಮಕೂರು ಸ್ಲಂ ಸಮಿತಿ ಮಾರ್ಗದರ್ಶನದಲ್ಲಿ ತುಮಕೂರು ನಗರದ ಸ್ಥಳೀಯವಾಗಿ ಜನಮಾನಸದಲ್ಲಿ ಇಲ್ಲಿನ ಜನರು ಉಳಿದಿದ್ದಾರೆ.
ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಶುಭಕಲ್ಯಾಣ್ ಇತ್ತೀಚೆಗೆ ಡಿ.ಸಿ.ಎಂ ಡಾ|| ಜಿ.ಪರಮೇಶ್ವರ್ ಸರ್ ಇಲ್ಲಿನ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ನೀಡಿ ಪೂಜೆ ಮಾಡಿದ ಸಂದರ್ಭದಲ್ಲಿ ಇಲ್ಲಿನ ನಾಗರೀಕರು ದೇವಸ್ಥಾನ ಅಭಿವೃದ್ಧಿಗೆ ಮನವಿ ಮಾಡಿದರು ಮಾನ್ಯ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ಸಾಹೇಬರ ನಿರ್ದೇಶನದಂತೆ ದೇವಸ್ಥಾನ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು ಇಲ್ಲಿನ ಜನರ ಸಾಂಸ್ಕೃತಿಕ ಮತ್ತು ಆಚಾರ-ವಿಚಾರಗಳು ಬದಲಾಗದೇ ಹಾಗೇ ಉಳಿಸಿಕೊಂಡು ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀ ಮಾರಿಯಮ್ಮ ದೇವಿಗೆ ಪೂಜೆ ಸಲ್ಲಿಸಿ ಜನರಿಗೆ ಸಿಹಿ ಹಂಚಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ ಅನುಪಮಾ, ಮಾರಿಯಮ್ಮ ಯುವಕರ ಸಂಘದ ಕಣ್ಣನ್, ಕೃಷ್ಣ, ಮಾರಿ, ಮಾಧವನ್, ರಾಜ, ಸ್ಲಂ ಸಮಿತಿಯ ಕಾರ್ಯದಶರ್ಿ ಅರುಣ್ ಮುಂತಾದವರು ಉಪಸ್ಥಿತರಿದ್ದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಪ್ರತಿನಿಧಿಗಳ ಸಮ್ಮೇಳನದಲ್ಲಿ ನಿರ್ಣಯ*ರಾಜ್ಯ ಸರ್ಕಾರ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಲು ಆಗ್ರಹ*.3 ವರ್ಷ ಕಳೆದು ನಾಯಕತ್ವ ಬದಲಾದರು ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೇಸ್ ಸರ್ಕಾರ ನೀಡಿರುವ ಚುನಾವಣಾ ಪೂರ್ವ ಮತ್ತು ನಂತರದ ಭರವಸೆಗಳನ್ನು ಕೂಡಲೇ ಈಡೇರಿಸಬೇಕೆಂದು ಇತ್ತೀಚಿಗೆ ಗದಗನ ಲಯನ್ಸ್ ಕ್ಲಬ್ನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಒಕ್ಕೋರಲ ನಿರ್ಣಯವನ್ನು

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಪ್ರತಿನಿಧಿಗಳ ಸಮ್ಮೇಳನದಲ್ಲಿ ನಿರ್ಣಯ*ರಾಜ್ಯ ಸರ್ಕಾರ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಲು ಆಗ್ರಹ*.3 ವರ್ಷ ಕಳೆದು ನಾಯಕತ್ವ ಬದಲಾದರು ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೇಸ್ ಸರ್ಕಾರ ನೀಡಿರುವ ಚುನಾವಣಾ ಪೂರ್ವ ಮತ್ತು ನಂತರದ ಭರವಸೆಗಳನ್ನು ಕೂಡಲೇ ಈಡೇರಿಸಬೇಕೆಂದು ಇತ್ತೀಚಿಗೆ ಗದಗನ ಲಯನ್ಸ್ ಕ್ಲಬ್ನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಒಕ್ಕೋರಲ ನಿರ್ಣಯವನ್ನು ಕೈಗೊಳ್ಳಲಾಯಿತು.ಕಳೆದ 3 ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಹಲವು ನೀತಿಗಳು ನಗರ ಬಡಜನರ/ ಸ್ಲಂ ನಿವಾಸಿಗಳ/ ನಗರವಂಚಿತ ಸಮುದಾಯಗಳಿಗೆ ಸಂವಿಧಾನ ಮತ್ತ ಬಡಜನ ವಿರೋಧಿಯಾಗಿವೆ ಎಂದು ಹಲವಾರು ಹೋರಾಟಗಳ ಮೂಲಕ ಪ್ರತಿರೋಧ ದಾಖಲಿಸಿದ್ದು ಕರ್ನಾಟಕದಲ್ಲಿ ಬುಲ್ಡೋಜರ್ ಸಂಸ್ಕೃತಿಯನ್ನು ಪ್ರಭಲವಾಗಿ ವಿರೋಧಿಸಲಾಗುವುದು ಸಿ.ಎಂ ಡಿ.ಕೆ. ಶಿವಕುಮಾರ್ ಬಿ.ಜೆ.ಪಿಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಗಳನ್ನು ಮೃದುವಾಗಿ ಅನುಸರಿಸಬಾರದು ಇದಕ್ಕಾಗಿ ಸ್ಲಂ ಜನರ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸಲು ಸಮ್ಮೇಳನದಲ್ಲಿ 18 ಜಿಲ್ಲಾ ಸಮಿತಿಗಳ ಪ್ರತಿನಿಧಿಗಳು ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರವನ್ನು ಎಚ್ಚರಿಸಲು ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.*ಗದಗ ಸಮ್ಮೇಳನದ ನಿರ್ಣಯಗಳು* :1. ಸ್ಲಂ ಜನರಿಗೆ ಕಾಂಗ್ರೇಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಮತ್ತು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ಸರ್ಕಾರ ರಚನೆ ನಂತರ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಬೇಕು. 2. ಸಿ.ಎಂ ಡಿ.ಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನೆಪದಲ್ಲಿ ನಗರ ಪ್ರದೇಶದಲ್ಲಿರುವ ಬಡವರು/ ಸ್ಲಂ ಜನರನ್ನು ನಿಯಂತ್ರಿಸುವ ಸ್ಮಾರ್ಟ್ ಮಾನದಂಡಗಳನ್ನು ಅನ್ವಯಿಸಬಾರದು ಮತ್ತು ಪಂಚ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.3. ಎಸ್ಐಆರ್ ಹೆಸರಿನಲ್ಲಿ ಚುನವಾಣಾ ಆಯೋಗ ಮತದಾರರ ತೀವ್ರ ಪರಿಷ್ಕರಣೆಯಲ್ಲಿ ರಾಜ್ಯದ ಸ್ಲಂ ನಿವಾಸಿಗಳು ಮತದ ಹಕ್ಕಿನಿಂದ ವಂಚಿತರಾಗದಂತೆ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಮತದ ಹಕ್ಕನ್ನು ರಕ್ಷಿಸಬೇಕು ಇದಕ್ಕಾಗಿ ರಾಜ್ಯಾದ್ಯಂತ ಕೊಳಚೆ ಪ್ರದೇಶಗಳಲ್ಲಿ ಸಂಘಟನೆಯಿಂದ ಜಾಗೃತಿಯನ್ನು ಕೈಗೊಳ್ಳುವುದು.4. ನೂತನ ಸರ್ಕಾರ ಸ್ಲಂ ಜನರಿಗೆ ಅನ್ನ, ಆಶ್ರಯ, ಆರೋಗ್ಯದಂತಹ ಸಂವಿಧಾನ ಖಾತ್ರಿಯನ್ನು ಜಾರಿಗೊಳಿಸಿ ಸಮಾನತೆಯ ಸಮಾಜ ನಿರ್ಮಿಸಬೇಕು,5. ಸ್ಲಂ ನಿವಾಸಿಗಳಿಗೆ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು.6. ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು.7. ರಾಜ್ಯದಲ್ಲಿ ವಸತಿ ಹಕ್ಕುಕಾಯಿದೆ ಮತ್ತು ನಗರ ಲ್ಯಾಂಡ್ ಬ್ಯಾಂಕ್ ನೀತಿಯನ್ನು ಜಾರಿ ಮಾಡಬೇಕು.8. ಸ್ಲಂ ನಿವಾಸಿಗಳು ವಾಸಿಸುವ ಪ್ರದೇಶಗಳಿಗೆ ‘ಶ್ರಮಿಕ ವರ್ಗಗಳ’ ಪ್ರದೇಶಗಳೆಂದು ನಾಮಕರಣ ಮಾಡಬೇಕು.9. ರಾಜ್ಯದಲ್ಲಿ ಸ್ಲಂ ನಿವಾಸಿಗಳಿಗೆ ಭೂ ಗ್ಯಾರಂಟಿಯಲ್ಲಿ ಹಕ್ಕುಪತ್ರ ವಿತರಣೆ/ನೊಂದಣಿಯನ್ನು ಸರಳೀಕರಿಸಿ ನಗರಸ್ಥಳೀಯ ಸಂಸ್ಥೆಗಳಿಂದ ಇ- ಖಾತಾವನ್ನು ನೀಡಬೇಕು.10. ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಲ್ಲಿ ರಾಜ್ಯದಲ್ಲಿ ಬಿಎಲ್ಸಿ BLC ಮಾದರಿಯಲ್ಲಿ 5 ಲಕ್ಷ ಕುಟುಂಬಗಳಿಗೆ ವಸತಿ ನಿರ್ಮಿಸಲು ಅನುದಾನ ನೀಡಬೇಕೆಂದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಉದ್ಘಾಟನೆಯನ್ನು ಪರಮಪೂಜ್ಯ ಡಾ.ಪ್ರಭು ಮಹಾಂತ ಮಹಾ ಸ್ವಾಮಿಜಿಗಳು. ಅಧ್ಯಕ್ಷತೆಯನ್ನು ಸಾವಿತ್ರ ಬಾಯಿಪುಲೆ ಮಹಿಳಾ ಸಂಘದ ಸಂಚಾಲಕಿ ಚಂದ್ರಮ್ಮ. ಪ್ರಾಸ್ತಾವಿಕ ನುಡಿಯನ್ನು ಎ.ನರಸಿಂಹಮೂರ್ತಿ ಎಸ್.ಜೆ.ಕೆ ರಾಜ್ಯ ಸಂಚಾಲಕರು ನೆರವೇರಿಸಿದರು. ಪ್ರಗತಿಪರ ಚಿಂತಕರಾದ ಬಸವರಾಜ್ ಸುಳಿಬಾವಿ, ಮುಖ್ಯ ಅತಿಥಿಗಳಾಗಿ ಪೂರ್ಣರವಿಶಂಕರ್, ಹೈಕೋರ್ಟ್ ನ್ಯಾಯವಾದಿಗಳು, ಎಂ.ಎಸ್ ಹಡಪದ ವಕೀಲರು, ವಿಭಾಗಿಯ ಸಂಚಾಲಕರಾದ ಇಮ್ತಿಯಾಜ್ ಮಾನ್ವಿ, ಜನಾರ್ಧನ್ ಹಳ್ಳಿಬೆಂಚಿ, ಜಿಲ್ಲಾ ಸಂಚಾಲಕರುಗಳಾದ ಶೋಭಾ ಕಮತಾರ್. ರೇಣುಕಾ ಸರಡಗಿ, ಸುಧಾ, ರೇಣುಕಾ ಯಲ್ಲಮ್ಮ, ಅರುಣ್, ಮಂಜುಬಾಯಿ, ವೆಂಕಮ್ಮ, ಪಕೀರಪ್ಪ ತಳವಾರ್, ಶೇಖರ್ ಬಾಬು ,ಮುತ್ತು ಬೋವಿ. ನಾಗರತ್ನ ಅಳವಂಡಿ. ರೇಷ್ಮ ಭಾನು. ಪರ್ವೀನ್ ಭಾನು.ರಸೂಲ್ ನದಾಫ್. ಹನುಮಂತ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.

ಜೈನ್ ಪಬ್ಲಿಕ್ ಸ್ಕೂಲ್, ತುಮಕೂರು ವತಿಯಿಂದ ಪ್ರತಿಷ್ಠಾಪನ /ಪದಗ್ರಹಣ ಸಮಾರಂಭ 2026ಜೈನ್ ಪಬ್ಲಿಕ್ ಸ್ಕೂಲ್, ತುಮಕೂರು ವತಿಯಿಂದ 20ನೇ ಜೂನ್ 2026 ರಂದು ಪ್ರತಿಷ್ಠಾಪನಾ ಸಮಾರಂಭವನ್ನು ಅತ್ಯಂತ ಸಂಭ್ರಮ ಮತ್ತು ಶಿಸ್ತಿನಿಂದ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 12ನೇ ಬೆಟಾಲಿಯನ್‌ನ ಕಮಾಂಡೆಂಟ್ ಶ್ರೀ ಹಮ್ಜಾ ಹುಸೇನ್ ಅವರು ಆಗಮಿಸಿದ್ದರು

ಜೈನ್ ಪಬ್ಲಿಕ್ ಸ್ಕೂಲ್, ತುಮಕೂರು ವತಿಯಿಂದ ಪ್ರತಿಷ್ಠಾಪನ /ಪದಗ್ರಹಣ ಸಮಾರಂಭ 2026ಜೈನ್ ಪಬ್ಲಿಕ್ ಸ್ಕೂಲ್, ತುಮಕೂರು ವತಿಯಿಂದ 20ನೇ ಜೂನ್ 2026 ರಂದು ಪ್ರತಿಷ್ಠಾಪನಾ ಸಮಾರಂಭವನ್ನು ಅತ್ಯಂತ ಸಂಭ್ರಮ ಮತ್ತು ಶಿಸ್ತಿನಿಂದ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 12ನೇ ಬೆಟಾಲಿಯನ್‌ನ ಕಮಾಂಡೆಂಟ್ ಶ್ರೀ ಹಮ್ಜಾ ಹುಸೇನ್ ಅವರು ಆಗಮಿಸಿದ್ದರು.ಕಾರ್ಯಕ್ರಮವು ವಿದ್ಯಾರ್ಥಿ ನಾಯಕರಿಂದ ನಡೆದ ಆಕರ್ಷಕ ಮಾರ್ಚ್ ಪಾಸ್ಟ್‌ನೊಂದಿಗೆ ಆರಂಭವಾಯಿತು. ವಿದ್ಯಾರ್ಥಿಗಳು ಶಿಸ್ತು, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವವನ್ನು ಪ್ರದರ್ಶಿಸಿದರು.ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ನಾಯಕತ್ವದ ಮಹತ್ವ, ಜವಾಬ್ದಾರಿ, ತಂಡದೊಂದಿಗೆ ಕೆಲಸ ಮಾಡುವ ಗುಣ ಮತ್ತು ಒಗ್ಗಟ್ಟಿನ ಪ್ರಯತ್ನಗಳ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಉತ್ತಮ ನಾಯಕನು ಇತರರಿಗೆ ಮಾದರಿಯಾಗಬೇಕು ಮತ್ತು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಬೇಕು ಎಂದು ಅವರು ತಿಳಿಸಿದರು.ನಂತರ ಮುಖ್ಯ ಅತಿಥಿಗಳು ಎಲ್ಲಾ ನೂತನ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ವಿತರಿಸಿ, ಅವರ ಜವಾಬ್ದಾರಿಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಈ ಸಮಾರಂಭವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು, ಬದ್ಧತೆ ಮತ್ತು ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಸುಷ್ಮಾ, ಉಪ ಪ್ರಾಂಶುಪಾಲರಾದ ಶ್ರೀ ಚನ್ನಬಸಯ್ಯ ಎಸ್. ಎಂ., ಆಪರೇಷನ್ ಮ್ಯಾನೇಜರ್ ಶ್ರೀ ಬಸವರಾಜು ಜಿ. ಎನ್., ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.ನಿಜವಾದ ನಾಯಕತ್ವವು ಕೇವಲ ಸ್ಥಾನಮಾನವಲ್ಲ; ಅದು ಜವಾಬ್ದಾರಿ, ತಂಡದ ಸಹಕಾರ ಮತ್ತು ಇತರರನ್ನು ಪ್ರೇರೇಪಿಸುವ ಗುಣವಾಗಿದೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ವರದಿ ಕಲ್ಪತರು ನ್ಯೂಸ್ ತುಮಕೂರು

ಕೆ.ಹೆಚ್. ಮುನಿಯಪ್ಪರಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ: ಒಳಮೀಸಲಾತಿ ಹೋರಾಟ ಸಮಿತಿ ಎಚ್ಚರಿಕೆತುಮಕೂರು, ಜೂ.16: ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯದ ಹಿರಿಯ ಮುಖಂಡ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿ, ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು

ಕೆ.ಹೆಚ್. ಮುನಿಯಪ್ಪರಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ: ಒಳಮೀಸಲಾತಿ ಹೋರಾಟ ಸಮಿತಿ ಎಚ್ಚರಿಕೆತುಮಕೂರು, ಜೂ.16: ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯದ ಹಿರಿಯ ಮುಖಂಡ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿ, ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಿಗ ಸಮುದಾಯವು ಹೊಲೆಯ ಸಮುದಾಯಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ, ಸಚಿವ ಸಂಪುಟದಲ್ಲಿ ಅವರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೊಲೆಯ ಸಮುದಾಯಕ್ಕೆ ಡಿಸಿಎಂ ಹುದ್ದೆ ಸೇರಿದಂತೆ ಎರಡು ಸಚಿವ ಸ್ಥಾನಗಳು ಹಾಗೂ ಗೃಹ, ಕಂದಾಯದಂತಹ ಪ್ರಭಾವಿ ಖಾತೆಗಳು ನೀಡಲಾಗಿದ್ದರೆ, ಆರು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಮಾತ್ರ ನೀಡಿರುವುದು ಅವಮಾನಕರವಾಗಿದೆ ಎಂದು ಹೇಳಿದರು.ಕೆ.ಹೆಚ್. ಮುನಿಯಪ್ಪ ಅವರ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡುವುದರ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ ಅವರು, 35 ವರ್ಷಗಳ ಹೋರಾಟವನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು. ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದರೂ, ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ಸರ್ಕಾರ ನಿರ್ಲಕ್ಷ್ಯ ವಹಿಸಿತು ಎಂದು ಟೀಕಿಸಿದರು.ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ಉಪಸಮಿತಿಯ ವರದಿಗಳನ್ನು ಕಡೆಗಣಿಸಿ, ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ರಚಿಸಿ, ಅದರ ಶಿಫಾರಸುಗಳನ್ನೂ ಸಂಪೂರ್ಣವಾಗಿ ಅನುಷ್ಠಾನಗೊಳಿಸದೆ ಮನಬಂದಂತೆ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.ಹೊಸ ಒಳಮೀಸಲಾತಿ ನೀತಿಯಲ್ಲಿ ಮೂರುಕ್ಕಿಂತ ಕಡಿಮೆ ಹುದ್ದೆಗಳಿದ್ದಲ್ಲಿ ಒಳಮೀಸಲಾತಿ ಅನ್ವಯಿಸುವುದಿಲ್ಲ ಎಂಬ ನಿಯಮ ರೂಪಿಸಿರುವುದರಿಂದ ಅದರ ಉದ್ದೇಶವೇ ಹಾಳಾಗಿದೆ ಎಂದು ಹೇಳಿದರು. ನಾಗಮೋಹನ ದಾಸ್ ವರದಿ ಆಧಾರದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಹಾಗೂ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಶೇ.1ರ ಪ್ರತ್ಯೇಕ ಮೀಸಲಾತಿ ನೀಡಿ, ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಸರ್ಕಾರದ ಧೋರಣೆ ಬದಲಾಗದಿದ್ದರೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮುದಾಯ ತಕ್ಕ ಉತ್ತರ ನೀಡಲಿದೆ ಎಂದು ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಬಸವರಾಜ ಕೌತುಕ್, ಪಾವಗಡ ಶ್ರೀರಾಮ್, ಎಂ. ಗುರುಮೂರ್ತಿ, ಡಾ. ವೈ.ಕೆ. ಬಾಲಕೃಷ್ಣಪ್ಪ, ಗಂಗಾಧರ್, ಚಾವಡಿ ಲೋಕೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.– ಉದಯಕುಮಾರ್, ಕಲ್ಪತರು ನ್ಯೂಸ್, ತುಮಕೂರು

ರಸಗೊಬ್ಬರ ಮಾರಾಟದಲ್ಲಿ ₹2,000 ಕೋಟಿ ಲೂಟಿ ಆರೋಪ: ಜೂ.18ರಿಂದ ಗೊಬ್ಬರ ಅಂಗಡಿಗಳ ಎದುರು ಕೆಆರ್‌ಎಸ್ ಪಕ್ಷದ ಹೋರಾಟತುಮಕೂರು, ಜೂ.16: ರಾಜ್ಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶಾಮೀಲಾತಿಯಿಂದ ರೈತರಿಂದ ರಸಗೊಬ್ಬರ ಮತ್ತು ಕೃಷಿ ಪರಿಕರಗಳಿಗೆ ಎಂಆರ್‌ಪಿಗಿಂತ ಹೆಚ್ಚಿನ ದರ ವಸೂಲಿ ಮಾಡಿ ₹2,000 ಕೋಟಿಗೂ ಅಧಿಕ ಪ್ರಮಾಣದ ಲೂಟಿ ನಡೆಯುತ್ತಿದೆ

ರಸಗೊಬ್ಬರ ಮಾರಾಟದಲ್ಲಿ ₹2,000 ಕೋಟಿ ಲೂಟಿ ಆರೋಪ: ಜೂ.18ರಿಂದ ಗೊಬ್ಬರ ಅಂಗಡಿಗಳ ಎದುರು ಕೆಆರ್‌ಎಸ್ ಪಕ್ಷದ ಹೋರಾಟತುಮಕೂರು, ಜೂ.16: ರಾಜ್ಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶಾಮೀಲಾತಿಯಿಂದ ರೈತರಿಂದ ರಸಗೊಬ್ಬರ ಮತ್ತು ಕೃಷಿ ಪರಿಕರಗಳಿಗೆ ಎಂಆರ್‌ಪಿಗಿಂತ ಹೆಚ್ಚಿನ ದರ ವಸೂಲಿ ಮಾಡಿ ₹2,000 ಕೋಟಿಗೂ ಅಧಿಕ ಪ್ರಮಾಣದ ಲೂಟಿ ನಡೆಯುತ್ತಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯ ನಡುವೆಯೂ ರೈತರು ಬಿತ್ತನೆ ಆರಂಭಿಸಿದ್ದು, ರಸಗೊಬ್ಬರ ಖರೀದಿಸಲು ಅಂಗಡಿಗಳಿಗೆ ಹೋದಾಗ ಎಂಆರ್‌ಪಿಗಿಂತ 25 ರಿಂದ 50 ಶೇಕಡಾ ಹೆಚ್ಚುವರಿ ದರ ಪಾವತಿಸುವಂತಾಗಿದೆ ಎಂದು ದೂರಿದರು.ಸರ್ಕಾರ ನಿಗದಿಪಡಿಸಿರುವ ಯೂರಿಯಾ ಗೊಬ್ಬರದ 45 ಕೆ.ಜಿ. ಚೀಲದ ಬೆಲೆ ₹266.50 ಇದ್ದರೂ, ಅಂಗಡಿಗಳಲ್ಲಿ ₹320 ರಿಂದ ₹600ರವರೆಗೆ ಮಾರಾಟವಾಗುತ್ತಿದೆ. ಅದೇ ರೀತಿ ಡಿಎಪಿ ಗೊಬ್ಬರದ 50 ಕೆ.ಜಿ. ಚೀಲಕ್ಕೆ ನಿಗದಿತ ಬೆಲೆ ₹1,350 ಇದ್ದರೂ, ₹1,450 ರಿಂದ ₹2,100ರವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಗೊಬ್ಬರ ಖರೀದಿಸಲು ರೈತರಿಗೆ ಇತರೆ ಕೃಷಿ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರಲಾಗುತ್ತಿದ್ದು, ನಿರಾಕರಿಸಿದರೆ ಗೊಬ್ಬರ ನೀಡದ ಬೆದರಿಕೆ ಹಾಕಲಾಗುತ್ತಿದೆ ಎಂದರು. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ ಕೃಷಿ ಇಲಾಖೆ ಆಯುಕ್ತರು ಜಿಲ್ಲೆಗಳ ಜಂಟಿ ನಿರ್ದೇಶಕರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದರೂ, ವಿಚಕ್ಷಣ ದಳ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.ಈ ಹಿನ್ನೆಲೆಯಲ್ಲಿ ಜೂನ್ 18ರಿಂದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಗೊಬ್ಬರ ಅಂಗಡಿಗಳ ಎದುರು ಠಿಕಾಣಿ ಹೂಡಿ ರೈತರಿಗೆ ನ್ಯಾಯ ಒದಗಿಸುವ ಹೋರಾಟ ಆರಂಭಿಸಲಿದ್ದಾರೆ ಎಂದು ತಿಳಿಸಿದರು.ಕ್ರಿಬ್ಕೋ ಮತ್ತು ಇಫ್ಕೋ ಕಂಪನಿಗಳು ತಮ್ಮ ಇತರೆ ಕೃಷಿ ಉತ್ಪನ್ನಗಳ ಖರೀದಿಯನ್ನು ಉತ್ತೇಜಿಸಲು ಡೀಲರ್‌ಗಳ ಮೇಲೆ ಒತ್ತಡ ಹೇರುತ್ತಿವೆ. ಇದರ ಪರಿಣಾಮವಾಗಿ ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ರೈತರ ಮೇಲೆ ಒತ್ತಡ ಹೇರಿದ್ದು, ಇದು ಗೊಬ್ಬರ ಕಂಪನಿಗಳು ಮತ್ತು ಕೃಷಿ ವಲಯದ ನಡುವಿನ ಅಲಿಖಿತ ಒಪ್ಪಂದದಂತೆ ಕಾಣುತ್ತಿದೆ ಎಂದು ಆರೋಪಿಸಿದರು.ಸರ್ಕಾರ ತಕ್ಷಣ ಅಗತ್ಯ ಪ್ರಮಾಣದ ರಸಗೊಬ್ಬರ ಸರಬರಾಜು ಮಾಡಬೇಕು, ಎಲ್ಲಾ ಗೊಬ್ಬರ ಅಂಗಡಿಗಳಲ್ಲಿ ದಾಸ್ತಾನು ಮತ್ತು ಬೆಲೆಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು, ದೂರು ಸಲ್ಲಿಸಲು ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಬೇಕು ಹಾಗೂ ನಿಯಮ ಉಲ್ಲಂಘಿಸುವ ಡೀಲರ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಕೆಆರ್‌ಎಸ್ ಪಕ್ಷ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ, ನರಸಿಂಹರಾಜು, ಗಂಗಾಧರ್, ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.– ಉದಯಕುಮಾರ್, ಕಲ್ಪತರು ನ್ಯೂಸ್, ತುಮಕೂರು

ಸ್ಲಂ ಜನರಿಗೆ ಕಾಂಗ್ರೇಸ್ ಪಕ್ಷ ನೀಡಿರುವ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು ಒತ್ತಾಯಿಸಿ ಗದಗನಲ್ಲಿ ರಾಜ್ಯ ಸಮ್ಮೇಳನ* ಇಂದು ಸ್ಲಂ ಭವನದಲ್ಲಿ ಸಭೆ ಸೇರಿದ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು

ಸ್ಲಂ ಜನರಿಗೆ ಕಾಂಗ್ರೇಸ್ ಪಕ್ಷ ನೀಡಿರುವ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು ಒತ್ತಾಯಿಸಿ ಗದಗನಲ್ಲಿ ರಾಜ್ಯ ಸಮ್ಮೇಳನ* ಇಂದು ಸ್ಲಂ ಭವನದಲ್ಲಿ ಸಭೆ ಸೇರಿದ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಜೂನ್ 20 ರಂದು ಗದಗ ನಗರದ ಲಯನ್ಸ್ ಕ್ಲಬ್ನಲ್ಲಿ ಹಮ್ಮಿಕೊಂಡಿರುವ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಪೂರ್ವ ಸಿದ್ದತೆಗಳನ್ನು ಸಮಾಲೋಚನೆ ನಡೆಸಿ ತುಮಕೂರಿನಿಂದ 50 ಜನ ಪ್ರತಿನಿಧಿಗಳು ಭಾಗವಹಿಸಲು ನಿರ್ಣಯಿಸಿ ತೀರ್ಮಾನಿಸಿ ರಾಜ್ಯ ಸರ್ಕಾರ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಹೋರಾಟವನ್ನು ತೀರ್ವಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಕಾಂಗ್ರೇಸ್ ಪಕ್ಷ 2023ರಲ್ಲಿ ತಮ್ಮ ಪಕ್ಷದ ಸರ್ವಜನಾಂಗದ ಶಾಂತಿಯ ತೋಟದಲ್ಲಿ 580 ಭರವಸೆಗಳನ್ನು ನೀಡಿ ಈ ಮೂರು ವರ್ಷದಲ್ಲಿ 290 ಭರವಸೆಗಳನ್ನು ಈಡೇರಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ 3 ವರ್ಷದ ಸಾಧನೆಯ ತುಮಕೂರು ಸಂಕಲ್ಪ ಸಮಾವೇಶದಲ್ಲಿ ಹೇಳಿರುವುದು ಸರಿಯಷ್ಟೇ. ಈ ಪ್ರಣಾಳಿಕೆಯಲ್ಲಿ ಸ್ಲಂ ಜನರಿಗೆ ಮತ್ತು ನಗರ ಪ್ರದೇಶದ ಬಡಜನರಿಗೆ ನೀಡಿದ ಭರವಸೆಗಳು ಇದುವರೆಗೂ ಈಡೇರಿಲ್ಲ. ಸಾಮಾಜಿಕ ನ್ಯಾಯ ಖಾತ್ರಿ ಮಾಡಲು ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ನೀಡಿದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು ಅದರಂತೆ ನಗರ ಉದ್ಯೋಗ ಖಾತ್ರಿ, ವಸತಿ ಹಕ್ಕು ಮತ್ತು ಲ್ಯಾಂಡ್ ಬ್ಯಾಂಕ್ , ಸ್ಲಂ ಜನರಿಗೆ ಪ್ರತೈಕ ಸಚಿವಾಲಯ ಸ್ಲಂ ಪ್ರದೇಶಗಳ ಬದಲಾಗಿ ಶ್ರಮಿಕರು ವಾಸಿಸುವ ತಾಣಗಳ ಹೆಸರು ಬದಲಾವಣೆ ನಗರ ಪ್ರದೇಶದಲ್ಲಿ ಬಡತನದ ಪ್ರಮಾಣ ಇಳಿಕೆ ಮಾಡಲು ಶಾಶ್ವತ ಕಾರ್ಯಕ್ರಮಗಳ ಭರವಸೆಯನ್ನು ನೀಡಲಾಗಿತ್ತು. ಆದರೆ ಕಳೆದ 3 ವರ್ಷದಲ್ಲಿ ಜಾರಿಗೆ ತಂದ ಹಲವು ನೀತಿಗಳು ಸ್ಲಂ ಜನ ವಿರೋಧಿಯಾಗಿದ್ದು ಸಾಮಾಜಿಕ ನ್ಯಾಯವಲ್ಲದ ಸಮಾಜಿಕ ಅನ್ಯಾಯಗಳನ್ನು ಸಿದ್ದು ನೇತೃತ್ವದ ಸರ್ಕಾರ ಸ್ಲಂ ಜನರಿಗೆ ಎಸಗಿದೆ. ಬಿಜೆಪಿಯ ಬುಲ್ಡೋಜರ್ ನೀತಿಯನ್ನು ಕಾಂಗ್ರೇಸ್ ಸರ್ಕಾರ ಬೆಂಗಳೂರಿನ ಕೋಗಿಲು ಥಣಿಸಂದ್ರ, ಅಕ್ಕಮಹಾದೇವಿ ಸ್ಲಂಗಳ ಬಡಜನರ ಗುಡಿಸಲುಗಳನ್ನು ನೆಲಸಮ ಮಾಡಿ ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡಿ ಐಷಾರಾಮಿ ಮಹಲುಗಳಿಗಾಗಿ ಬೀದಿ ವ್ಯಾಪಾರಿಗಳ ಎತ್ತಂಗಡಿ ಮಾಡಿದೆ. ಸ್ಲಂ ಜನರಿಗೆ ಕುಡಿಯುವ ನೀರು ಕೊಡದಿದ್ದರು. ಬೆಂಗಳೂರಿನಲ್ಲಿ ಟ್ಯಾನಲ್ ರೋಡ್ ನಿರ್ಮಿಸಲು 24 ಸಾವಿರ ಕೋಟಿ ನೀಡಿದೆ, ಸಂವಿಧಾನ ಬದ್ದವಲ್ಲದ ಎಸ್ಐಆರ್ ಎಂಬ ಪ್ರಜಾಸತ್ತಾತ್ಮಕವಲ್ಲದ ವಿಶೇಷ ಮತಪರಿಷ್ಕರಣೆಯನ್ನು ಕಾಂಗ್ರೇಸ್ ಒಪ್ಪಿಕೊಂಡಿರುವುದು ರಾಜ್ಯದಲ್ಲಿರುವ ವಂಚಿತ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಮತದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ, ನೆನ್ನೆ ನಡೆದ ಮುಖ್ಯಮಂತ್ರಿಗಳ ನೇತೃತ್ವದ ಡಿ.ಸಿ ಮತ್ತು ಸಿಇಒಗಳ ಸಭೆಯಲ್ಲಿ ವಾಸಸ್ಥಳ ದೃಢೀಕರಣ ಪತ್ರ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ ಆದರೆ ಪಂಚ ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸಲು ಹೊಸದಾಗಿ ಅರ್ಜಿ ಕರೆಯುವ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ತೀರ್ಮಾನ ಬಡಜನರ ಕಲ್ಯಾಣವನ್ನು ನಿಯಂತ್ರಿಸುವ ಭಾಗವಾಗಿದೆ, ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಸರ್ಕಾರ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ನೆನಪಿಸಲು ಗದಗನಲ್ಲಿ ನಡೆಯುವ ರಾಜ್ಯ ಪ್ರತಿನಿಧಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೀಪಿಕಾ ಸ್ಲಂ ಜನರು ಸಿದ್ದರಾಮಯ್ಯ ನವರ ಮೇಲೆ ಇಟ್ಟಿದ್ದ ಭರವಸೆ ನಿರಾಸೆಯಾಗಿದೆ, ಉಳಿದ ಎರಡು ವರ್ಷಗಳ ಅವಧಿಯಲ್ಲಿ ಸಿ.ಎಂ ಡಿ.ಕೆ ಶಿವಕುಮಾರ್ ಸ್ಲಂ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದರು.ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿಗೆ ಪ್ರತಿನಿಧಿಗಳನ್ನಾಗಿ ದೀಪಿಕಾ-ಶೆಟ್ಟಿಹಳ್ಳಿ, ಶಂಕ್ರಯ್ಯ-ಅರಳೀಮರದ ಪಾಳ್ಯ, ಎ.ನರಸಿಂಹಮೂರ್ತಿ – ಎನ್.ಆರ್ ಕಾಲೋನಿ, ಶಾಂತಮ್ಮ-ಸತ್ಯಮಂಗಲ, ತಿರುಮಲಯ್ಯ- ದಿಬ್ಬೂರು, ಅರುಣ್-ನಿವಾಣಿ ಲೇಔಟ್, ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಕಣ್ಣನ್, ಕೃಷ್ಣ, ಶಾರದಮ್ಮ, ಜಾಬೀರ್ಖಾನ್, ಮಂಗಳಮ್ಮ, ಕೆಂಪಣ್ಣ, ಶಾಬುದ್ದೀನ್, ಮುಬಾರಕ್, ಪೂರ್ಣಿಮಾ, ಗುಲ್ನಾಜ್, ಹನುಮಕ್ಕ, ಸಲ್ಮಾಬಾನು, ನರಸಿಂಹಮೂರ್ತಿ ವಡ್ಡಾ, ಮಂಜುನಾಥ್, ಮುಂತಾದವರು ಪಾಲ್ಗೊಂಡಿದ್ದರು.

ವೀರಲೋಕ ಪುಸ್ತಕ ಸಂತೆ ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ: ಪ್ರಾಂಶುಪಾಲ ಚಂದ್ರಯ್ಯಶಿರಾ: ಕನ್ನಡ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ ಹಾಗೂ ಜನಪರ ಕಾರ್ಯಕ್ರಮವಾಗಲಿದೆ ಎಂದು ಶಿರಾ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಅಭಿಪ್ರಾಯಪಟ್ಟರು

ವೀರಲೋಕ ಪುಸ್ತಕ ಸಂತೆ ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ: ಪ್ರಾಂಶುಪಾಲ ಚಂದ್ರಯ್ಯಶಿರಾ: ಕನ್ನಡ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ ಹಾಗೂ ಜನಪರ ಕಾರ್ಯಕ್ರಮವಾಗಲಿದೆ ಎಂದು ಶಿರಾ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೀರಲೋಕ ಪುಸ್ತಕ ಸಂತೆಯಲ್ಲಿ ಬಹಳಷ್ಟು ಜನಸಾಮಾನ್ಯರು ಭಾಗವಹಿಸಿ ತಮ್ಮ ಇಷ್ಟದ ಪುಸ್ತಕಗಳನ್ನು ಖರೀದಿಸುವ ಅವಕಾಶ ದೊರೆಯಲಿದೆ. ಪುಸ್ತಕ ಓದುವ ಹವ್ಯಾಸವನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜ್ಞಾನ ಮತ್ತು ಅರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಒಂದು ಉತ್ತಮ ಪುಸ್ತಕವನ್ನು ಖರೀದಿಸಲು ಬೆಂಗಳೂರಿನಂತಹ ಮಹಾನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಅಲ್ಲಿನ ಹೆಚ್ಚಿನ ಟ್ರಾಫಿಕ್ ಹಾಗೂ ಸಮಯದ ಸಮಸ್ಯೆಗಳ ನಡುವೆ ಪುಸ್ತಕ ಖರೀದಿಸುವುದು ಕಷ್ಟಕರವಾಗುತ್ತದೆ. ಆದರೆ ತುಮಕೂರು ಜಿಲ್ಲೆಯಲ್ಲಿಯೇ ಇಂತಹ ಅದ್ಭುತ ಪುಸ್ತಕ ಸಂತೆ ಆಯೋಜನೆಯಾಗಿರುವುದು ಜಿಲ್ಲೆಯ ಪುಸ್ತಕ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ ಎಂದು ತಿಳಿಸಿದರು.ತುಮಕೂರಿನ ಗಾಜಿನ ಮನೆಯಲ್ಲಿ ನಡೆಯಲಿರುವ ಈ ಪುಸ್ತಕ ಸಂತೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಭಾಗವಹಿಸಲಿದ್ದು, ಸಾಹಿತ್ಯ, ಇತಿಹಾಸ, ವಿಜ್ಞಾನ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಾವಿರಾರು ಪುಸ್ತಕಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಓದುಗರಿಗೆ ತಮ್ಮ ಆಸಕ್ತಿ ಮತ್ತು ಹವ್ಯಾಸಕ್ಕೆ ಅನುಗುಣವಾಗಿ ಬೇಕಾದ ಎಲ್ಲಾ ರೀತಿಯ ಪುಸ್ತಕಗಳು ಇಲ್ಲಿ ದೊರೆಯಲಿವೆ ಎಂದು ಹೇಳಿದರು.ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಜಿಲ್ಲೆಯ ಓದುಗರನ್ನು ಪುಸ್ತಕಗಳತ್ತ ಸೆಳೆಯುವ ಮೂಲಕ ಓದುವ ಸಂಸ್ಕೃತಿಗೆ ಹೊಸ ಉತ್ತೇಜನ ನೀಡಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಪುಸ್ತಕ ಓದುವುದು ಜ್ಞಾನ ವೃದ್ಧಿಗೆ ಅತ್ಯುತ್ತಮ ಮಾರ್ಗ: ಸಮಾಜಸೇವಕ ಕಲ್ಕೆರೆ ರವಿಕುಮಾರ್ಶಿರಾ: ಪುಸ್ತಕ ಓದುವ ಹವ್ಯಾಸವು ವ್ಯಕ್ತಿಯ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಸಮಾಜದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಮಾಜಸೇವಕ ಕಲ್ಕೆರೆ ರವಿಕುಮಾರ್ ಅಭಿಪ್ರಾಯಪಟ್ಟರು.ವೀರಲೋಕ ಪುಸ್ತಕ ಸಂತೆ ಕುರಿತು ಮಾತನಾಡಿದ ಅವರು, ತಮಗೂ ಸಹ ಪುಸ್ತಕ ಓದುವ ಅಭ್ಯಾಸವಿದ್ದು, ಬೆಂಗಳೂರಿನ ಸಪ್ನಾ ಬುಕ್ ಸ್ಟಾಲ್‌ಗೆ ಭೇಟಿ ನೀಡಿದಾಗ ಒಂದೇ ಬಾರಿ 20 ರಿಂದ 25 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವನ್ನು ತುಮಕೂರಿನ ಗಾಜಿನ ಮನೆಯಲ್ಲಿ ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಖ್ಯಾತ ಸಾಹಿತಿಗಳು, ಲೇಖಕರು ಹಾಗೂ ಪುಸ್ತಕ ಪ್ರೇಮಿಗಳು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ತಾವೂ ಸಹ ಹಾಜರಾಗಿ ಪುಸ್ತಕ ಪ್ರೇಮಿಗಳೊಂದಿಗೆ ಸಂವಾದ ನಡೆಸಲಿದ್ದೇನೆ ಎಂದು ರವಿಕುಮಾರ್ ಹೇಳಿದರು.ಇಂತಹ ಪುಸ್ತಕ ಮೇಳಗಳು ಯುವಜನರಲ್ಲಿ ಓದುವ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ವೀರಲೋಕ ಪುಸ್ತಕ ಸಂತೆ ತಂಡದೊಂದಿಗೆ, ಸಿರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಪಿ.ಪಾಂಡುರಂಗಯ್ಯ, , ಸಮಾಜಸೇವಕ ಕಲ್ಕೆರೆ ರವಿಕುಮಾರ್, ಪ್ರಾಂಶುಪಾಲರಾದ ಚಂದ್ರಯ್ಯ, ಜಿಲ್ಲಾ ಪುಸ್ತಕ ಸಂತೆ ಸಂಚಾಲಕರಾದ ಆರ್.ಕೆ.ಶ್ರೀನಿವಾಸ್, ಜಾನಪದ ಆಕಾಡೆಮಿ ಸದಸ್ಯರು ಹಾಗೂ ಜನಪದ ಗಾಯಕರಾದ ಮಲ್ಲಿಕಾರ್ಜುನ್ ಕೆಂಕೆರೆ, ರೂಪೇಶ್ ಕೃಷ್ಣಯ್ಯ, ತುಮಕೂರು ಎಕ್ಸ್‌ಪ್ರೆಸ್‌ ದಿನ ಪತ್ರಿಕೆ ಸಂಪಾದಕರಾದ ಸೀಗಲಹಳ್ಳಿ ನರಸಿಂಹ ಮೂರ್ತಿ, ಲೇಖಕಿ ಪೂರ್ಣಿಮಾ ಬಾಬು, ಸಾಹಿತಿ ಸಕ್ಕರ ನಾಗರಾಜು, ಹೆಂದೊರೆ ಶಿವಣ್ಣ, ದ್ವಾರನಕುಂಟೆ, ಲಕ್ಷಣ , ರವಿಕುಮಾರ್, ಹುಣಸೆಹಳ್ಳೆ ರಾಜಣ್ಣ, ಸೇರಿದಂತೆ ಹಲವು ಕನ್ಮಡ ಅಭಿಮಾನಿಗಳು ಭಾಗವಹಿಸಿದ್ದರು

Call Us Now
WhatsApp