ತುಮಕೂರು.ಮೇ.04:ಐದು ರಾಜ್ಯಗಳ ಚುನಾವಣೆ ಇರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ ಲೋಕಸಭಾ ವಿಶೇಷ ಅಧಿವೇಶದಲ್ಲಿ ಮಂಡಿಸಿದ ಮಹಿಳಾ ಮೀಸಲು ಮಸೂದೆ, ತೆರೆ ಮರೆಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಹೂಡಿದ ತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಕುಸುಮ ತಿಳಿಸಿದ್ದಾರೆ

ತುಮಕೂರು.ಮೇ.04:ಐದು ರಾಜ್ಯಗಳ ಚುನಾವಣೆ ಇರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ ಲೋಕಸಭಾ ವಿಶೇಷ ಅಧಿವೇಶದಲ್ಲಿ ಮಂಡಿಸಿದ ಮಹಿಳಾ ಮೀಸಲು ಮಸೂದೆ, ತೆರೆ ಮರೆಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಹೂಡಿದ ತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಕುಸುಮ ತಿಳಿಸಿದ್ದಾರೆ.ಈಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2023ರ ಸೆಪ್ಟಂಬರ್ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಿ,ಒಮ್ಮತದಿAದ ಅಂಗೀಕಾರವಾದ ಮಸೂದೆಯನ್ನು ಜಾರಿಗೆ ತರದೆ, ಐದು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಮುಂದೆ ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂದು ಬಿಂಬಿಸುವ ಸಲುವಾಗಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಾಡಿದ ಕುತಂತ್ರವಾಗಿದೆ.ಈ ಸತ್ಯವನ್ನು ಜನರ ಮುಂದಿಡುವ ಸಲುವಾಗಿ ಕೆಪಿಸಿಸಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಮಾಧ್ಯಮಗಳು ಮತ್ತು ಜನರ ಮುಂದೆ ಇಂತಹ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಯುಪಿಎ ಸರಕಾರ ಸಿದ್ದಪಡಿಸಿದ ಮಹಿಳಾ ಬಿಲ್ನ್ನು ಅದೇ ಹೆಸರಿನಲ್ಲಿ 2023ರಲ್ಲಿ ಮಂಡಿಸಿ, ಒಪ್ಪಿಗೆ ಪಡೆದು, 2026ರ ಜನಗಣತಿ ನಂತರ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಿ,ನಂತರ ಜಾರಿಗೆ ತರುವ ಮಾತುಗಳನ್ನಾಡಿದ್ದ ಕೇಂದ್ರ ಸರಕಾರ,ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಜನರ ಬಳಿ ಹೋಗಲು ಮುಖವಿಲ್ಲದೆ, ಮತ್ತೊಮ್ಮೆ ನಾರಿ ಶಕ್ತಿ ವಂದನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ನಾಟಕವಾಡಿ,ಮತದಾರರನ್ನು ಮರಳು ಮಾಡಲು ಬಳಸಿಕೊಂಡಿದೆ.ನಿಜವಾದ ಮಹಿಳಾ ವಿರೋಧಿಗಳೆಂದರೆ ಅದು ಬಿಜೆಪಿ ಪಕ್ಷ,ಮಹಿಳೆಯರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಈಗಾಗಲೇ ಅನುಮೋಧನೆ ಯಾಗಿರುವ ಬಿಲ್ನ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ33ರಷ್ಟು ಮಹಿಳಾ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಲಿ ಎಂದು ಕುಸುಮ ಸವಾಲು ಹಾಕಿದರು.ಕಾಂಗ್ರೆಸ್ ತನ್ನ 140 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಮಹಿಳಾ ವಿರೋಧಿಯಾಗಿ ನಡೆದುಕೊಂಡಿಲ್ಲ.ಕಾAಗ್ರೆಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾಗಿ ಅನಿಬೇಸೆಂಟ್ಅವರನ್ನು, ಪ್ರಧಾನಿಯಾಗಿ ಇಂದಿರಾಗಾAಧಿ,ಸ್ಪೀಕರ್ ಆಗಿ ಮೀರಾಕುಮಾರಿ, ರಾಷ್ಟçಪತಿ ಯಾಗಿ ಪ್ರತಿಭಾಪಾಟೀಲ್,ಗರ್ನರ್ ಆಗಿ ಸರೋಜಿನಿ ನಾಯ್ಡು ಹೀಗೆ ಕಾಂಗ್ರೆಸ್ನಿAದ ಅಧಿಕಾರ ಪಡೆದ ಮಹಿಳೆಯರ ದೊಡ್ಡ ದಂಡೇ ಇದೆ.ಆದರೆ ಬಿಜೆಪಿಯನ್ನು ಮುನ್ನೆಡೆಸುತ್ತಿರುವ ಆರ್.ಎಸ್.ಎಸ್.ನಲ್ಲಿ ಇದುವರೆಗೂ ಮಹಿಳೆಯರಿಗೆ ಅವಕಾಶವಿಲ್ಲ ಏಕೇ ?,ಮೋದಿ ಅವರಿಗೆ ನಿಜಕ್ಕೂ ಮಹಿಳೆಯರಿಗೆ ಅಧಿಕಾರ ನೀಡಬೇಕೆಂದಿದ್ದರೆ, ಅವರ ಸ್ಥಾನಕ್ಕೆ ಮಹಿಳೆಯರೊಬ್ಬರನ್ನು ಆಯ್ಕೆ ಮಾಡಿ, ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿ.ಹೀಗಿರುವ 543 ಕ್ಷೇತ್ರಗಳಲ್ಲಿಯೇ ಶೇ33ರಷ್ಟು ಸಂಸದರ ಸ್ಥಾನವನ್ನು ಮಹಿಳೆಯರಿಗೆ ಬಿಟ್ಟುಕೊಡಲಿ.ಮತ ರಾಕಜಕಾರಣಕೋಸ್ಕರ ಮಹಿಳಾ ಮೀಸಲಿನಂತಹ ಮಹತ್ವದ ಮಸೂದೆಯನ್ನು ಅಪಮಾನಿಸಬಾರದು ಎಂದರು.ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ,ಕೇವಲ ಐದು ರಾಜ್ಯಗಳ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶದಿಂದ ಈಗಾಗಲೇ ಎರಡು ಸದನಗಳಲ್ಲಿ ಅನುಮೋಧನೆಗೊಂಡಿರುವ ಮಹಿಳಾ ಮೀಸಲು ಮಸೂದೆ ಪುನಃ ಮಂಡಿಸಿ, ಕಾಂಗ್ರೆಸ್ ಪಕ್ಷವನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷ ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಕೊಡುಗೆ ಏನು ? ಎಂದು ಪ್ರಶ್ನಿಸಿದ ಅವರು,ಇದುವರೆಗೂ ಮಹಿಳೆಯರ ಪರವಾಗಿ ಇರುವ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ,, ನೆಹರು ಕಾಲದಿಂದ ಇಲ್ಲಿಯವರೆಗೂ ಪಕ್ಷದಲ್ಲಾಗಲಿ, ಸರಕಾರಗಳ ಆಡಳಿತದಲ್ಲಾಗಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ಕಾಂಗ್ರೆಸ್ ನೀಡಿದೆ.ಬಿಜೆಪಿಯ ಅಪಪ್ರಚಾರದ ವಿರುದ್ದ ಮಹಿಳಾ ಕಾಂಗ್ರೆಸ್ ಮತ್ತಷ್ಟು ಸತ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಾಡಲಿದೆ ಎಂದರು.ಕೆಪಿಸಿಸಿಯ ಡಾ.ವನಿತಾ ಮಾತನಾಡಿ,ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಬಿಂಬಿಸುತ್ತಿರುವ ಬಿಜೆಪಿಯ ಹೇಳಿಕೆ ತಪ್ಪು ಎಂದು ಜನರಿಗೆ ತಿಳಿಸುವ ಸಲುವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಮಾಧ್ಯಮ ಗೋಷ್ಠಿ ಆಯೋಜಿಸಲಾಗುತ್ತಿದೆ. 2023ರಲ್ಲಿ 2011ರ ಜನಗಣತಿ ಅನ್ವಯ ಮಹಿಳಾ ಕ್ಷೇತ್ರಗಳ ವಿಂಗಡನೆ ಸರಿಯಲ್ಲ ಎಂದು ಹೇಳಿದ್ದ ಬಿಜೆಪಿ, ಐದು ರಾಜ್ಯಗಳ ಚುನಾವಣೆ ಬಂದ ತಕ್ಷಣ ಮಹಿಳಾ ಮೀಸಲು ಮಂಡನೆಗೆ ನಾಟಕ ಆರಂಭಿಸಿತ್ತು. ಇದರ ಹಿಂದಿನ ಸತ್ಯ ಅರಿತಿದ್ದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಅದಕ್ಕೆ ಸೋಲುಂಟಾಗುವAತೆ ಮಾಡಿವೆ.ಮಹಿಳೆಯರ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಮೊದಲು ಉನಾವೋ, ಹತ್ರಾಸ್,ಮಣಿಪುರದಲ್ಲಿ ಪ್ರಾಣ, ಮಾನ ಕಳೆದುಕೊಂಡು ನರಳುತ್ತಿರುವ ಕುಟುಂಬಗಳಿಗೆ ನ್ಯಾಯ ದೊರಕಿಸಲಿ, ಎಸ್.ಐ.ಆರ್,ಮೂಲಕ ಹಿಂಬಾಗಿಲ ರಾಜಕಾರಣ ಗಟ್ಟಿಗಳಿಸಿಕೊಳ್ಳಲು ಹೊರಟಿದೆ ಎಂದರು.ಕೆಪಿಸಿಸಿ ಮತ್ತೊಬ್ಬ ಮುಖಂಡರಾದ ಶುಭ ಮಾತನಾಡಿ,ಮನಮೋಹನ್ ಸಿಂಗ್ ಸರಕಾರ ನಿರ್ಭಯ ಪ್ರಕರಣವನ್ನೇ ಕೇಂದ್ರವಾಗಿಟ್ಟುಕೊAಡು, ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಮಕ್ಕಳಿಗೆ ತ್ವರಿತ ನ್ಯಾಯ ಒದಗಿಸಲು ನಿರ್ಭಯ ಕಾಯ್ದೆ ಜಾರಿಗೆ ತಂದು, ಅದಕ್ಕಾಗಿ ಸುಮಾರು 4000 ಕೋಟಿ ರೂಗಳನ್ನು ಮೀಸಲಿಟ್ಟಿತ್ತು. ಆದರೆ ಮೋದಿ ಸರಕಾರ ಆ ಹಣವನ್ನು ತನ್ನ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದೆ.ಇದರ ಬಗ್ಗೆ ಬಿಜೆಪಿ ಮಹಿಳಾ ಮುಖಂಡರಿAದ ಚಕಾರವಿಲ್ಲ. ಲೋಕಸಭೆಯಲ್ಲಿ ಬಿಜೆಪಿ ಮಂಡಿಸಿದ್ದು ಮಹಿಳಾ ಮಸೂದೆಯಲ್ಲ. ಬಿಜೆಪಿ ಪುರುಷ ಸಂರಕ್ಷಣಾ ಮಸೂದೆ ಎಂದು ಲೇವಡಿ ಮಾಡಿದರು.ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಬಿಜೆಪಿ ಪಕ್ಷ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸಲು ಹೊರಟಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಇಂದು ಕೆಪಿಸಿಸಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಅಭಿಯಾನ ನಡೆಸಿ, ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮೊದಲ ಹಂತದಲ್ಲಿ ನಡೆಸಿದ್ದೇವೆ.ಎರಡನೇ ಹಂತದಲ್ಲಿ ಶಾಲಾ, ಕಾಲೇಜುಗಳಲ್ಲಿ ಯುವಜನರಿಗೆ ಮಹಿಳಾ ಮಸೂದೆಯ ಹಿಂದಿನ ಕಹಿ ಸತ್ಯಗಳನ್ನು ಸಂವಾದ, ವಿಚಾರ ಸಂಕಿರಣದ ಮೂಲಕ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ವಿಜಯಲಕ್ಷಿö್ಮ, ಎಸ್ಸಿ ಸೇಲ್ನ ಲಿಂಗರಾಜು, ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ಮಂಜುನಾಥ್, ಶಿವಾಜಿ, ಸೇವಾದಳದ ಭೈಲಪ್ಪ, ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

