ಸಿದ್ಧಗಂಗೆಯ ಪುಣ್ಯಭೂಮಿಯಲ್ಲಿ ಆಧ್ಯಾತ್ಮದ ಅಲೆ!ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪತಿ ಮುರ್ಮು ಅವರ ಘನ ಉಪಸ್ಥಿತಿ ಹಾಗೂ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ

ಸಿದ್ಧಗಂಗೆಯ ಪುಣ್ಯಭೂಮಿಯಲ್ಲಿ ಆಧ್ಯಾತ್ಮದ ಅಲೆ!ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪತಿ ಮುರ್ಮು ಅವರ ಘನ ಉಪಸ್ಥಿತಿ ಹಾಗೂ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ನಡೆದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವದಲ್ಲಿ ಭಾಗವಹಿಸಿದೆ.ಸಿದ್ಧಗಂಗಾ ಮಠ ಎಂದರೆ ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಹಸಿದವರಿಗೆ ಅನ್ನ ಸಿಗುವ ಸ್ಥಳ, ಬಡ ಮಕ್ಕಳಿಗೆ ಶಿಕ್ಷಣ ಸಿಗುವ ಸ್ಥಳ, ಆಶ್ರಯವಿಲ್ಲದವರಿಗೆ ಮನೆ ಸಿಗುವ ಸ್ಥಳ, ಮೌಲ್ಯವಿಲ್ಲದ ಬದುಕಿಗೆ ದಿಕ್ಕು ಸಿಗುವ ಸ್ಥಳ. ಇದು ನಿಜಕ್ಕೂ ಮಾನವೀಯತೆಯ ವಿಶ್ವವಿದ್ಯಾಲಯ.ಉತ್ತಮ ಶಿಕ್ಷಣ, ಉನ್ನತ ಸಂಸ್ಕಾರ, ಉದಾತ್ತ ಜೀವನದ ದಾರಿ ತೋರಿದವರು ಶ್ರೀಗಳು.ಪೂಜ್ಯರು ನಮಗೆ ಬೋಧಿಸಿದ ಅತ್ಯಂತ ಮಹತ್ವದ ಸಂದೇಶವೆಂದರೆ ಅನ್ನ ದಾಸೋಹ, ಅಕ್ಷರ ದಾಸೋಹ, ಆಧ್ಯಾತ್ಮಿಕ ದಾಸೋಹ. ಈ ಮೂರು ದಾಸೋಹಗಳು ಕೇವಲ ಪದಗಳಲ್ಲ, ಅವು ಸಮಾಜ ನಿರ್ಮಾಣದ ಮೂರು ಸ್ತಂಭಗಳು.ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್, ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಚಿವರಾದ ಎಂ.ಬಿ.ಪಾಟೀಲ, ಅಪಾರ ಸಂಖ್ಯೆಯ ಸಿದ್ದಗಂಗಾ ಮಠದ ಭಕ್ತರು ಉಪಸ್ಥಿತರಿದ್ದರು.