ಪಾವಗಡ:ಡಾ”ಬಿ, ಆರ್ ಅಂಬೇಡ್ಕರ್ ಕೊಟ್ಟಿರುವಂತಹ ಸಂವಿಧಾನದಿಂದ ಸಾಕಷ್ಟು ಬದಲಾವಣೆಯಾಗಿದೆ. ಹಾಗೂ ಬಾಬು ಜಗಜೀವನ್ ರಾಮ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಅಧ್ಯಕ್ಷತೆ ವಹಿಸಿಕೊಂಡ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ತಿಳಿಸಿದರು

ಪಾವಗಡ:ಡಾ”ಬಿ, ಆರ್ ಅಂಬೇಡ್ಕರ್ ಕೊಟ್ಟಿರುವಂತಹ ಸಂವಿಧಾನದಿಂದ ಸಾಕಷ್ಟು ಬದಲಾವಣೆಯಾಗಿದೆ. ಹಾಗೂ ಬಾಬು ಜಗಜೀವನ್ ರಾಮ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಅಧ್ಯಕ್ಷತೆ ವಹಿಸಿಕೊಂಡ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ತಿಳಿಸಿದರು.ತಾಲೂಕಿನ ನಿಡಗಲ್ಲು ಹೋಬಳಿ ವ್ಯಾಪ್ತಿಯ ಪೆಮ್ಮನಹಳ್ಳಿ ಈ ಗ್ರಾಮದಲ್ಲಿ ಮಹಿಳೆಯರು ಕುಂಭಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ *135ನೇ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ119ನೇ ಡಾ” ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ* ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯನ್ನು ಯುವಕರು ನೀಲಿ ಬಾವುಟಗಳನ್ನು ಹಿಡಿದು ‘ಜೈ ಭೀಮ್’ ಘೋಷಣೆಗಳೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದರು, ಶ್ರೀ ಅಭಿನವ್ ಕೋಟಿ ಎಂಬ ವಿದ್ಯಾರ್ಥಿಯಿಂದ ಸಂವಿಧಾನ ಪೀಠಿಕೆಯನ್ನು ಓದಿಸಿ ಭೀಮ ಬಂಧುಗಳಿಗೆ ತಿಳಿಸಿದನು,ಈ ಸಭೆಯನ್ನು ಕಲಾವಿದ ಹನುಮಂತರಾಯಪ್ಪ ಸಿ ಕೆ ಪುರ, ಇವರ ತಂಡದಿಂದ ಅಂಬೇಡ್ಕರ್ ರವರ ಹಾಡಿನ ಮೂಲಕ ಸ್ಮರಿಸುತ್ತಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕರಾದ ತಿಮ್ಮರಾಯಪ್ಪನವರು ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ನಮ್ಮ ಯುವಕರು ಎಲ್ಲೇ ಅಂಬೇಡ್ಕರ್ ಜಯಂತಿಗಳು ಮಾಡಿದರೆ ಮೊದಲು ಕಿಲ್ಲಾರ್ಲಹಳ್ಳಿ ನವೀನ್ ರವರಿಗೆ ವೇದಿಕೆ ಕೊಡಿ,ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಗಳನ್ನು ಮಾಡುತ್ತಾ ಅವರಿಬ್ಬರನ್ನು ನೆನಪಿಸಿಕೊಳ್ಳಬೇಕು ತುಂಬಾ ಕೆಳ ಸಮಾಜದ ಈ ಸಮಾಜವನ್ನು ಕೆಟ್ಟ ವಾತಾವರಣದಲ್ಲಿ ಬದುಕಿರುವಂತಹ ಸಮಾಜವನ್ನು ಸ್ವಾತಂತ್ರ ಬಂದಮೇಲೆ ಸರ್ವರಿಗೂ ಸಮಾನ ಎಂದು ಭಾವನೆ ಬಂತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದ ಅವಕಾಶವನ್ನು ಸಮಾಜಕ್ಕೆ ಅಳವಡಿಸಿದ್ದಾರೆ ಎಂದು ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಬಗ್ಗೆ ಹೆಚ್ಚಿನದಾಗಿ ತಿಳಿಸಿದರು, ಎ ಪಿ ಪಿ ರಾಮಾಂಜಿನಪ್ಪ ಮಾತನಾಡುತ್ತಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಆಚರಣೆ ಮಾಡುವುದರ ಮೂಲಕ ನಾವೆಲ್ಲ ಸಂತೋಷ ಪಡುತ್ತಿದ್ದೇವೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ದಿನದಲಿತರು ಸರ್ವ ಜನಾಂಗಕ್ಕೂ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿ ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದು ತಿಳಿಸಿದರು,ಮಾದರ್ ಮಹಾಸಭಾ ಸಂಘದ ನಿಡಗಲ್ ಹೋಬಳಿ ಅಧ್ಯಕ್ಷರಾದ ಹನುಮಂತರಾಯಪ್ಪನವರು ಮಾತನಾಡುತ್ತಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಶಿಕ್ಷಣ ಸಂಘಟನೆ ಹೋರಾಟ ಶಿಕ್ಷಣಕ್ಕೆ ಹೆಚ್ಚಿನದಾಗಿ ತಂದೆತಾಯಿಗಳು ಮಕ್ಕಳಲ್ಲಿ ಅರಿವು ಮೂಡಿಸಿದರೆ ಮಾತ್ರ ಇವತ್ತು ಅಂಬೇಡ್ಕರ ಅಂತಹ ಕಲಾವಿದರು ನೂರಾರು ಜನ ಆಗಬಹುದು, ಶಿಕ್ಷಣಕ್ಕೆ ಎಷ್ಟು ಹೊತ್ತು ಕೊಡುತ್ತೇವೋ, ಸಂಘಕ್ಕೂ ಕೂಡ ಅಷ್ಟೇ ಹೊತ್ತು ನೀಡಬೇಕು ಒಳ ಮೀಸಲಾತಿಗೆ ಒಂದು ಸುವರ್ಣ ಅವಕಾಶ ಸಿಕ್ಕಿದೆ, ನಮ್ಮ ಮಾಧರ್ ಮಹಾ ಸಂಘದ ನೋಂದಣಿ ಮಾಡಿಸಿಕೊಳ್ಳಿ ನಿಮಗೆ ಯಾವ ಕಷ್ಟ ಬಂದರೂ ಈ ಸಂಘದಿಂದ ನೋಂದಣಿ ಮಾಡಿಸಿಕೊಂಡರೆ ತುಂಬಾ ಅನುಕೂಲವಾಗಿರುತ್ತದೆ ಎಂದು ತಿಳಿಸಿದರು,ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕಿಲ್ಲಾರ್ಲಹಳ್ಳಿ ರವರು ಮಾತನಾಡುತ್ತಾ ಶಿಕ್ಷಣಕ್ಕೆ ವಂಚಿತರಾದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಂತ ಸಾವಿತ್ರಿಬಾಯಿ ಫುಲೆ ಮನೆ ಬಿಡುತ್ತಾರೆ, ನನ್ನ ಜನಗಳಿಗೆ ಸಮಾನತೆ ಮತ್ತು ನ್ಯಾಯ ಕೊಡಬೇಕು ಅನ್ನ ನೀರು ಕೊಡಿಸಬೇಕು ಅಂತಹ ಹೇಳಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಧರ್ಮವನ್ನೇ ಬಿಡುತ್ತಾರೆ ಅಂತಹ ಪುಣ್ಯಾತ್ಮನ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ ಇದು ಕೇವಲ ದಿನಾಚರಣೆ ಅಲ್ಲ ಕಾರ್ಯಕ್ರಮ ಅಲ್ಲ ಬದುಕಲು ಯುಗವನ್ನು ತಿರುಗಿ ನೋಡುವಂತಹ ದಿನ ನಮ್ಮಂತಹ ಧ್ವನಿ ಇಲ್ಲದವರಿಗೆ ಶಕ್ತಿ ಕೊಡುವಂತಹವರು ನಮ್ಮ ಹಕ್ಕುಗಳಿಗೆ ಬೆಳಕಾಗಿ ಚೆಲ್ಲುವಂತಹ ಮಹಾತ್ಮರನ್ನು ಸ್ಮರಣೆ ಮಾಡುವಂತಹ ದಿನ ಎಂದು ತಿಳಿಸಿದರು,ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದಸಿ ಕೆ ತಿಪ್ಪೇಸ್ವಾಮಿ ರವರು ಮಾತನಾಡುತ್ತಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜಯಂತಿಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರ ಅಂಬೇಡ್ಕರ್ ಅವರು ನಮಗೆ ಕಾನೂನು ರಚನೆ ಮಾಡಿಕೊಟ್ಟಿದ್ದಾರೆ ಆ ಕಾನೂನು ರೀತಿಯಲ್ಲಿ ಬಾಬು ಜಗಜೀವನ್ ರಾಮ್ ರವರು ಸಂವಿಧಾನದ ಮೂಲಕ ನಾವೆಲ್ಲರೂ ಹಕ್ಕುಗಳನ್ನು ಪಡೆಯಬಹುದು ಎಂದು ಅವರು ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಜಾರಿ ಮಾಡಿರುವಂತಹ ಕೆಲಸ ಮಾಡಿದ್ದಾರೆ ರೈಲ್ವೆ ಮಂತ್ರಿಗಳಾಗಿದ್ದರು ಆ ಸಂದರ್ಭದಲ್ಲಿ ತುಂಬಾ ಅಸೃಶ್ಯತೆ ಇತ್ತು ಈಗಲೂ ನಮ್ಮನ್ನು ನೌಕರರಾಗಿ ಯಾರನ್ನು ಸೇರಿಸಿಕೊಳ್ಳುತ್ತಿರಲಿಲ್ಲ ಅಂತಹ ಸಂದರ್ಭದಲ್ಲಿ ಅವರಿಗೆ ಅಸ್ಪೃಶ್ಯತೆ ನೋವು ಇತ್ತು, ಬಡತನ ಏನು ಅಂತ ಗೊತ್ತಿತ್ತು, ಆ ಕಾರಣದಿಂದ ಬಹಳಷ್ಟು ಜನ ರೈಲ್ವೆ ನೇಮಕಾತಿಯಲ್ಲಿ ನಮ್ಮವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕೆಂದು ಅವರು ರೈಲ್ವೆ ಮಂತ್ರಿಗಳಾಗಿದ್ದರು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ನಾಗರಾಜಪ್ಪ ಮಾಸ್ಟರ್, ಕೆ ಪಿ ಲಿಂಗಣ್ಣ, ವೆಂಕಟರಮಣ ನಿರೂಪಣೆ, ನಾಗರಾಜು ಹರಿಹರಪುರ, ಪೊಲೀಸ್ ಸಿಬ್ಬಂದಿ, ಹಾಗೂ ಟಿಎನ್ ಬೆಟ್ಟ ಗ್ರಾಮದ ಎಲ್ಲ ಸಮಸ್ತ ಬಂಧುಗಳು, ಪಾಲ್ಗೊಂಡಿದ್ದರು,ವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ