ಕೌಶಲ್ಯಾಧಾರಿತ ತರಭೇತಿಗಳಿಂದ ಮಹಿಳೆಯರು ಸ್ವಾವಲಂಭಿಗಳಾಗಬೇಕು- ಭಾನುಪ್ರತಾಪ್ ಸಿಂಹ ಎಇಇ ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಸ್ಲಂಗಳಲ್ಲಿ ನಿರುದ್ಯೋಗಿ ಮಹಿಳೆಯರಿಗಾಗಿ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ತುಮಕೂರು ನಗರದ ಎನ್.ಆರ್ ಕಾಲೋನಿಯಲ್ಲಿ ಹಮ್ಮಿಕೊಂಡು

ಕೌಶಲ್ಯಾಧಾರಿತ ತರಭೇತಿಗಳಿಂದ ಮಹಿಳೆಯರು ಸ್ವಾವಲಂಭಿಗಳಾಗಬೇಕು-* *ಭಾನುಪ್ರತಾಪ್ ಸಿಂಹ ಎಇಇ* ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಸ್ಲಂಗಳಲ್ಲಿ ನಿರುದ್ಯೋಗಿ ಮಹಿಳೆಯರಿಗಾಗಿ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ತುಮಕೂರು ನಗರದ ಎನ್.ಆರ್ ಕಾಲೋನಿಯಲ್ಲಿ ಹಮ್ಮಿಕೊಂಡು ಸಮಾರೋಪಗೊಳಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಲಂ ಬೋರ್ಡ್ ಎಇಇ ಬಾನುಪ್ರತಾಪ್ಸಿಂಹ ಮಾತನಾಡಿ ಸ್ಲಂ ಜನಾಂದೋಲನ ಕರ್ನಾಟಕ ಒತ್ತಾಯದ ಮೇರೆಗೆ ತುಮಕೂರು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಿರುದ್ಯೋಗಿ ಮಹಿಳೆಯರಿಗೆ 1 ತಿಂಗಳ ಟೈಲರಿಂಗ್ ತರಭೆತಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಲಾಗಿತ್ತು ಹೆಣ್ಣು ಮಕ್ಕಳಲ್ಲಿ ಸೆಲ್ಫ್ ಕಾನ್ಫಿಡೆನ್ಸ್ ಬೆಳಸಿಕೊಳ್ಳಬೇಕು, ಕೌಶಲ್ಯ ಆಧಾರಿತ ತರಭೇತಿಗಳಿಂದ ಸ್ವಾವಲಂಭಿಗಳಾಗಬೇಕು ಎಂಬ ಸದುದ್ದೇಶದಿಂದ ಕಳೆದ 30 ದಿನಗಳಿಂದ ನುರಿತ ತರಭೇತಿ ಒದಗಿಸಲಾಗಿದೆ, ಎಲ್ಲರು ತುಂಬಾ ಶ್ರದ್ದೆ, ವಿನಯತೆಯಿಂದ ತರಬೇತಿಯ ಅವಕಾಶ ಬಳಸಿಕೊಂಡ ಶಿಬಿರಾರ್ಥಿಗಳು ಭವಿಷ್ಯ ಉಜ್ವಲವಾಗಲಿ ಎಂದು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.ನಂತರ ಮಾತನಾಡಿದ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ ಸ್ಲಂಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ನಿರುದ್ಯೋಗಿ ಮಹಿಳೆಯರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಉತ್ತಮವಾದ ಟೈಲರಿಂಗ್ ತರಬೇತಿ ನೀಡಿ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಶ್ಲಾಘನೀಯವಾಗಿದೆ. ದುಡಿಯುವ ಶ್ರಮಜೀವಿಗಳು ಬಹುತೇಕ ಸ್ಲಂಗಳಲ್ಲಿಯೇ ಜೀವಿಸುತ್ತಿರುವುದು ನಗರದ ಅಭಿವೃದ್ಧಿಗೆ ಮತ್ತು ಸೌಂಧರ್ಯವನ್ನು ಕಾಪಾಡುವಲ್ಲಿ ಸ್ಲಂ ನಿವಾಸಿಗಳ ಶ್ರಮವೇ ಬಹುಪಾಲು, ನಮ್ಮ ಸಮುದಾಯದ ಹೆಣ್ಣು ಮಕ್ಕಳು ಕ್ಲಿಷ್ಟಕರವಾದ ಕೆಲಸ ಮಾಡಿದರು ಸ್ವಾಭಿಮಾನಿಗಳಂತೆ ಬದುಕುತ್ತಾರೆ, ಪುರುಷರಿಗಿಂತ ನಾವು ಯಾವುದರಲ್ಲು ಕಡಿಮೆಯಿಲ್ಲ ಎಂಬ ಸ್ವಾವಲಂಬಿ ಬದುಕಿಗೆ ಇಂತಹ ತರಬೇತಿಗಳು ಬಹಳ ಅವಶ್ಯಕ. ತರಬೇತಿ ಮುಂದುವರಿಸಲು ಮತ್ತು ಸ್ವಯಂ ಉದ್ಯೋಗಿಗಳಾಗಲು ಸರ್ಕಾರ ಟೈಲರಿಂಗ್ ಮಿಷನ್ ಮತ್ತು ಶಿಷ್ಯವೇತನ ದೊರಕಿಸಿಕೊಟ್ಟರೇ ಮತ್ತಷ್ಟು ಸಹಕಾರ ನೀಡಿದಂತಾಗುತ್ತದೆ. ಜೀತ ಪದ್ದತಿಯಿಂದ ಹೋರಬಂದು ಹೆಣ್ಣು ಮಕ್ಕಳ ಶೀಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಪುಲೆ ರವರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ ಎನ್.ಆರ್ ಕಾಲೋನಿ ಮತ್ತು ಅಂಬೇಡ್ಕರ್ ನಗರಗಳಲ್ಲಿ ಬಹುತೇಕ ಹೆಣ್ಣು ಮಕ್ಕಳು ನಗರದ ಅಕ್ಕಪಕ್ಕದ ಶ್ರೀಮಂತರ ಮನೆಗಳಲ್ಲಿ ಮನೆಕೆಲಸಕ್ಕೆ ಮತ್ತು ಚೌಟರಿ ಇತರೆ ಅಸಂಘಟಿತ ಕೆಲಸಗಳಿಗೆ ಹೋಗುತ್ತಾರೆ ಯಾವುದೇ ಭದ್ರತೆ ಇಲ್ಲ ಸರ್ಕಾರದ ನೆರವಿಲ್ಲ, ಅವತ್ತಿಗೆ ದುಡಿದು ಮಕ್ಕಳನ್ನು ಸಾಕುವ ಜೊತೆಗೆ ಮನೆಯ ಒಳಗಡೆ ದುಡಿಯುವವರೆ ಹೆಚ್ಚು, ಕೇವಲ ಮನೆಯ ಕೆಲಸಗಳಿಗೆ ಸೀಮಿತರಾಗದೇ ಸ್ವಯಂ ಉದ್ಯೋಗಿಗಳಾಗಬೇಕು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನಕ್ಕೆ 100 ಮಹಿಳೆಯರಿಗೆ ಸ್ಲಂ ಬೋರ್ಡ್ ನಿಂದ ಉಚಿತ ಟೈಲರಿಂಗ್ ತರಬೇತಿ ಕೊಡಿಸಲಾಗಿದೆ. ಎನ್ ಆರ್ ಕಾಲೋನಿಯ ಅಭಿವೃದ್ಧಿಗಾಗಿ ನಿರಂತರ ಹೋರಾಟ ನಡೆಬೇಕು, ಎಲ್ಲಾ ತಾಯಂದಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ತುಮಕೂರು ಮಹನಗರ ಪಾಲಿಕೆಯಿಂದ ನಿರ್ಮಾಣವಾಗಿರುವ ಸಮುದಾಯ ಭವನಗಳು ಪಾಳು ಬೀಳದೇ ನಿರಂತರ ಚಟುವಟಿಕೆಗೆ ಬಳಕೆಯಾಗಲು ಡಿಜಿಟಲ್ ಮತ್ತು ಕಂಪ್ಯೂಟರ್ ತರಬೇತಿ ನೀಡುವ ಮಾಹಿತಿ ಕೇಂದ್ರಗಳನ್ನಾಗಿ ಮಾಡುಲು ಸ್ಥಳೀಯ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಲಿ ಎಂದರು.ಕಾರ್ಯಕ್ರಮದ ಸಮಾರೋನುಡಿಗಳನ್ನಾಡಿದ ತುಮಕೂರಿನ ನಂಬರ್ 1 ಟೈಲರಿಂಗ್ ಅಕಾಡೆಮಿಯ ಗೀತಾ ಶಿಬಿರಾರ್ಥಿಗಳಿಗೆ ಶುಭಕೊರಿದರು ಮತ್ತು ಅವರ ಟೈಲರಿಂಗ್ ಅಕಾಡೆಮಿಯಲ್ಲಿ ಮತ್ತಷ್ಟು ಕಲಿಕೆ ಮತ್ತು ಆರ್ಥಿಕ ಆಯಮಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಉಚಿತವಾಗಿ ತರಬೇತಿಗಳನ್ನು ನೀಡುವುದಾಗಿ ಅಶ್ವಾಸನೆ ನೀಡಿದರು.ಕಾರ್ಯಕ್ರಮದಲ್ಲಿ ತುಮಕೂರು ಸ್ಲಂ ಬೋರ್ಡ್ ಅಸಿಸ್ಟೆಂಟ್ ಇಂಜಿನಿಯರ್ ರಕ್ಷಿತ್, ತರಬೇತುದಾರರಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಅಂಡ್ ಕಮ್ಯೂನಿಕೇಷನ್ ಅಡ್ವೈಸ್ಮೆಂಟ್ಸ ಸಂಸ್ಥೆಯ ರಾಘವೇಂದ್ರ, ಚೈತ್ರಾ, ಹಾಗೂ ಗೀತಾ ಅಕಾಡೆಮಿಯ ತರಬೇತುದಾರರಾದ ನೇತ್ರಾವತಿ. ಶಿಲ್ಪಾ. ರಕ್ಷಿತಾ ಉಪಸ್ಥಿತರಿದ್ದರು.