Free health check-up camp at Malur Dinne
ಮರಳೂರು ದಿಣ್ಣೆ ಪೊಲೀಸ್ ಸ್ಟೇಷನ್ ಮುಂಭಾಗ ದಲಿ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಶಿಬಿರದಲ್ಲಿ ಬಿ ಪಿ ಶುಗರ್ ಕಣ್ಣಿನ ನೋವು ಹಲ್ಲು ನೋವು ಅನೇಕ ಕಾಯಿಲೆಗಳಿಗೆ ತಪಾಸಣೆ ಮಾಡಲಾಯಿತು ಉಚಿತವಾಗಿ ಔಷಧಿ ವಿತರಣೆ ಮಾಡಿ ತಪಾಸಣೆ ಮಾಡಿಸಿಕೊಳ್ಳಲು ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಾ. ರಂಗಸ್ವಾಮಿ H. V ಸಹಾಯಕ ಪ್ರಾಧ್ಯಾಪಕರು ಸಮುದಾಯ ಆರೋಗ್ಯ ವಿಭಾಗ ಶ್ರೀದೇವಿ ಮೆಡಿಕಲ್ ಕಾಲೇಜ್ ಡಾ. ನಾಗಭೂಷಣ್ S.R ವೈದ್ಯಾಧಿಕಾರಿಗಳು ನಗರ ಆರೋಗ್ಯ ಕೇಂದ್ರ ಶಾಂತಿನಗರ. ಡಾ. ರಾಜೇಶ್ ಜನರಲ್ ಸರ್ಜನ್ ಡಾ. ನಾಗರಾಜ್ ಪಾಟೀಲ್ ಜಿಲ್ಲಾ ಸಂಯೋಜಕರು ಸರ್ವೇಕ್ಷಣ ಘಟಕ ತುಮಕೂರು ಡಾ. ಗುರುಪ್ರಸಾದ್ ಕೌನ್ಸಿಲರ್ ಎನ್ ಸಿ ಡಿ ವಿಭಾಗ ಜಿಲ್ಲಾ ಆಸ್ಪತ್ರೆ ತುಮಕೂರು ಮತ್ತು ಶ್ರೀದೇವಿ ವೈದ್ಯಕೀಯ ತಂಡ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮಕ್ಧೂಮ್ ಅಲಿ ರವರು ಹಿರಿಯ ವೈದ್ಯರಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಣ್ಣ ರವರು ಮತ್ತು ವಾರ್ಡಿನ ಎಲ್ಲಾ ಮುಖಂಡರುಗಳು ಆಟೋ ಚಾಲಕರು ಭಾಗವಹಿಸಿದರು.


