ಪಾವಗಡ : ಪಟ್ಟಣದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಪಾವಗಡ ಆಸ್ಪತ್ರೆ ನೂತನವಾಗಿ ಆಸ್ಪತ್ರೆಯನ್ನು ಮಾಜಿ ಸಚಿವರು ವೆಂಕಟರಮಣಪ್ಪ ಇಂದು ಅದ್ಧೂರಿಯಾಗಿ ಉದ್ಘಾಟಿಸಿ ಶುಭಾಶಯಗಳು ಕೋರಿದರು,ಪಾವಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ

ಮಾಜಿ ಸಚಿವರು ವೆಂಕಟರಮಣಪ್ಪ ಪಾವಗಡದಲ್ಲಿ ನೂತನವಾಗಿ ಪಾವಗಡ ಆಸ್ಪತ್ರೆ ಉದ್ಘಾಟಿಸಿದರು ಪಾವಗಡ : ಪಟ್ಟಣದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಪಾವಗಡ ಆಸ್ಪತ್ರೆ ನೂತನವಾಗಿ ಆಸ್ಪತ್ರೆಯನ್ನು ಮಾಜಿ ಸಚಿವರು ವೆಂಕಟರಮಣಪ್ಪ ಇಂದು ಅದ್ಧೂರಿಯಾಗಿ ಉದ್ಘಾಟಿಸಿ ಶುಭಾಶಯಗಳು ಕೋರಿದರು,ಪಾವಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ *”ಆರೋಗ್ಯವೇ ಭಾಗ್ಯ ಎಂಬಂತೆ,* ತಾಲ್ಲೂಕಿನ ಜನರಿಗೆ ತುರ್ತು ಸಂದರ್ಭದಲ್ಲಿ ಉತ್ತಮ ಚಿಕಿತ್ಸೆ ಸ್ಥಳೀಯವಾಗಿ ಸಿಗುವಂತಾಗಬೇಕು. ಈ ನೂತನ ಆಸ್ಪತ್ರೆಯು ಬಡವರು ಮತ್ತು ಸಾಮಾನ್ಯ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲಿ,” ಎಂದು ಆಶಿಸಿದರು. *ಕಾರ್ಯಕ್ರಮದ ಮುಖ್ಯಾಂಶಗಳು* : ಮಾಜಿ ಸಚಿವರು ಟೇಪ್ ಕತ್ತರಿಸುವ ಮೂಲಕ ಆಸ್ಪತ್ರೆಯ ವಿವಿಧ ಘಟಕಗಳನ್ನು ವೀಕ್ಷಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಆಧುನಿಕ ವೈದ್ಯಕೀಯ ಉಪಕರಣಗಳು ಮತ್ತು ತಜ್ಞ ವೈದ್ಯರ ಲಭ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. *ಈ ಸಂದರ್ಭದಲ್ಲಿ* ಮಲ್ಲೇಶ್ ಬಿ ಎಂ, ಹನುಮಂತರೆಡ್ಡಿ ಜರ್ಸಿ, ನಾಗಭೂಷಣ ರೆಡ್ಡಿ ಶ್ರೀರಾಮ ಮೆಡಿಕಲ್, ತಾಲ್ಲೂಕು ರೈತ ಸಂಘ ಅಧ್ಯಕ್ಷರು ನರಸಿಂಹ ರೆಡ್ಡಿ, ಕೃಷ್ಣಮೂರ್ತಿ ಕೆ ಎ, ಪೂಜಾರಪ್ಪ ರೈತ ಸಂಘದ ಜಿಲ್ಲಾಧ್ಯಕ್ಷರು, ಗುರ್ರಪ್ಪ ಮಾಜಿ ಪುರಸಭೆ ಅಧ್ಯಕ್ಷರು, ವೆಂಕಟೇಶ ಪರಿಟಲ, ನಾಗರಾಜು, ನಾನಿ, ಮಂಜು ಬೋರ್ ವೆಲ್, ತೆಂಗಿನಕಾಯಿರೆಡ್ಡಿ, ಗುಟ್ಟಹಳ್ಳಿ ಅಂಜಿನಪ್ಪ, ನಾಗರಾಜು ನಲಿಗಾನಹಳ್ಳಿ, ಸುಬ್ರಹ್ಮಣ್ಯ, ಇನ್ನು ಅನೇಕ ತಾಲ್ಲೂಕಿನ ಜನತೆ ಭಾಗವಹಿಸಿದ್ದರು,ವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ

