ನಗರಪಾಲಿಕೆ ತೆರಿಗೆ ಪರಿಷ್ಕರಣೆಯಿಂದ ಜನರಿಗೆ ದುಬಾರಿ ಹೊರೆಕಾನೂನು ವಿರೋಧಿ ತೆರಿಗೆ ಹೆಚ್ಚಳ ರದ್ದುಪಡಿಸಲು ಆಗ್ರಹತುಮಕೂರು: ತುಮಕೂರು ನಗರಪಾಲಿಕೆಯು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು
ನಗರಪಾಲಿಕೆ ತೆರಿಗೆ ಪರಿಷ್ಕರಣೆಯಿಂದ ಜನರಿಗೆ ದುಬಾರಿ ಹೊರೆಕಾನೂನು ವಿರೋಧಿ ತೆರಿಗೆ ಹೆಚ್ಚಳ ರದ್ದುಪಡಿಸಲು ಆಗ್ರಹತುಮಕೂರು: ತುಮಕೂರು ನಗರಪಾಲಿಕೆಯು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು
Oplus_16908288

ನಗರಪಾಲಿಕೆ ತೆರಿಗೆ ಪರಿಷ್ಕರಣೆಯಿಂದ ಜನರಿಗೆ ದುಬಾರಿ ಹೊರೆಕಾನೂನು ವಿರೋಧಿ ತೆರಿಗೆ ಹೆಚ್ಚಳ ರದ್ದುಪಡಿಸಲು ಆಗ್ರಹತುಮಕೂರು: ತುಮಕೂರು ನಗರಪಾಲಿಕೆಯು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು, ಇಲ್ಲವಾದಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿಸಲ್ಲಿಸುವುದಾಗಿ ರಾಷ್ಟಿçÃಯ ಮಾನವ-ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರೆಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇಕಡ ೦.೨ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು. ಇದರಿಂದ ಸುಮಾರು ಶೇಕಡ ೫೦ರಷ್ಟು ತೆರಿಗೆ ಹೊರೆ ಜನರ ಮೇಲೆ ಬೀಳಲಿದೆ. ಈ ಮೂಲಕ ನಗರಪಾಲಿಗೆ ಹಗಲು ದರೋಡೆಗಿಳಿದಿದೆ ಎಂದು ಟೀಕಿಸಿದರು.ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿ ಆದೇಶ ಸಂಖ್ಯೆ: ಆಸ್ತಿ ತೆರಿಗೆ ಪರಿಷ್ಕರಣೆಗೆ ೫೦/೪-೧೯೫/೨೦೨೫-೨೬, ೨:೨೩-೦೩-೨೦೨೬೦೦೩ ಸಂಬAಧಿಸಿದAತೆ ಆದೇಶ ಹೊರಡಿಸಿದ್ದು, ಸದರಿ ಆದೇಶದಲ್ಲಿ ೨೦೨೫-೨೬ನೇ ಸಾಲಿಗೆ ಪಾವತಿಸಿಕೊಳ್ಳುತ್ತಿರುವ ಆಸ್ತಿ ತೆರಿಗೆಯನ್ನು, ನೊಂದಣಿ ಮತ್ತು ಮುದ್ರಾಂಕ ಶುಲ್ಕದ ಶೇ ೨ರಷ್ಟು ಇದ್ದು, ೨೦೨೬-೨೭ನೇ ಸಾಲಿನ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇ ೦.೨ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು, ಉಲ್ಲೇಖ (೧) ಮತ್ತು (೨)ರ ಪ್ರಕಾರ ಅಂತ ನಮೂದಿಸಿರುತ್ತಾರೆ. ಈ ಪರಿಷ್ಕರಣೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡ ೫೦ರಷ್ಟು ಜಾಸ್ತಿ ಆಗುವುದು ಎಂದು ಹೇಳಿದರು.೨೦೨೬-೨೭ನೇ ಸಾಲಿಗೆ ಪರಿಷ್ಕರಣೆ ಶುಲ್ಕ ಕ್ರಯದ ಒಟ್ಟು ಮೊಬಲಗು ಮೊತ್ತದ ಶೇಕಡ ೦.೨ರಷ್ಟು ಪಾವತಿಸಿಕೊಳ್ಳಲು ಸದರಿ ಅಧಿನಿಯಮದಲ್ಲಿ ಯಾವ ಅವಕಾಶವೂ ಇಲ್ಲ. ಸದರಿ ಅಧಿನಿಯಮವು ಇದುವರೆವಿಗೂ ತಿದ್ದುಪಡಿಯೂ ಕೂಡ ಆಗಿರುವುದಿಲ್ಲ. ಆದ್ದರಿಂದ ಸದರಿ ಪರಿಷ್ಕರಣೆ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ ಹಾಗೂ ಕರ್ನಾಟಕ ಸ್ಟಾಂಪ್‌ಗಳ ಅಧಿನಿಯಮ ೧೯೫೭ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸದರಿ ತೆರಿಗೆ ಪರಿಷ್ಕರಣೆಯು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಈ ರೀತಿ ಪರಿಷ್ಕರಣೆಗೆ ಆದೇಶವಿಲ್ಲದಿದ್ದಲ್ಲಿ ಸದರಿ ಪರಿಷ್ಕರಣೆಯನ್ನು ಕೂಡಲೇ ತಡೆಹಿಡಿಯಬೇಕೆಂದು ಜಿ.ಎಸ್. ಬಸವರಾಜು ಒತ್ತಾಯಿಸಿದರು.೨೦೨೫-೨೬ನೇ ಸಾಲಿನ ನೀರಿನ ತೆರಿಗೆ ರೂ. ೨೪೦೦ ಇದ್ದು, ೨೦೨೬-೨೭ನೇ ಸಾಲಿಗೆ ರೂ. ೩೬೦೦ ಎಂದು ಪರಿಷ್ಕರಣೆ ಆಗಿರುತ್ತದೆ. ಅಂದರೆ ಕಳೆದ ವರ್ಷಕ್ಕಿಂತ ಶೇ ೫೦ರಷ್ಟು ಜಾಸ್ತಿಯಾಗಿರುತ್ತದೆ. ಸದರಿ ತೆರಿಗೆ ಕಳೆದ ವರ್ಷಕ್ಕಿಂತ ಶೇ ೨೦೦ರಷ್ಟು ಹೆಚ್ಚಳವಾಗಿದ್ದು, ಈ ರೀತಿ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಿಸಲು ಸರ್ಕಾರದ ಆದೇಶ ಅಥವಾ ನಿರ್ದೇಶನ ಇಲ್ಲದಿದ್ದಲ್ಲಿ ಈ ಕೂಡಲೇ ತೆರಿಗೆ ಪರಿಷ್ಕರಣೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಹಿಂಪಡೆಯಬೇಕು ಎಂದರು.ಜನ ಸಂಪರ್ಕ ಸದರಿ ಪರಿಷ್ಕರಣೆಗೆ ಸಂಬAಧಿಸಿದAತೆ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ದೂರು ನೀಡಿದಾಗ, ಆಯುಕ್ತರ ಸಮಕ್ಷಮದಲ್ಲೇ ಸಚಿವರು ತೆರಿಗೆ ಪರಿಷ್ಕರಣೆಗೆ ಅಸಮಾಧಾನ ವ್ಯಕ್ತಪಡಿಸಿ, ತೆರಿಗೆ ಪರಿಷ್ಕರಣೆ ಹಿಂಪಡೆಯುವAತೆ ಆಯುಕ್ತರಿಗೆ ಮೌಖಿಕ ಆದೇಶ ನೀಡಿದರು. ತೆರಿಗೆ ಹೆಚ್ಚಳ ರದ್ದುಪಡಿಸದಿದ್ದರೆ ಸಂಬAಧಿಸಿದವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಜಿ.ಎಸ್. ಬಸವರಾಜು ಎಚ್ಚರಿಕೆ ನೀಡಿದರು.ರಾಮಮಂದಿರ ವ್ಯವಸ್ಥಾಪನಾ ಸಮಿತಿ ರಚನೆಜಿಲ್ಲಾಧಿಕಾರಿಗಳ ಆದೇಶ ಕಾನೂನುಬಾಹಿರನಗರದ ಕೆ.ಆರ್. ಬಡಾವಣೆಯ ಪುರಾತನ ರಾಮಮಂದಿರ ಧಾರ್ಮಿಕ ದತ್ತಿ ಇಲಾಖೆ ವ್ಯಾಪಿಯಲ್ಲಿದ್ದು, ಈ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳು ಕಾನೂನುಬಾಹಿರವಾಗಿ ಸೂಚನೆ ನೀಡಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಬಗ್ಗೆ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ತೀರ್ಮಾನ ಆಗಬೇಕು. ಆದರೆ ಸಭೆಯ ತೀರ್ಮಾನವೇ ಇಲ್ಲದೆ ಜಿಲ್ಲಾಧಿಕಾರಿಗಳು ವ್ಯವಸ್ಥಾಪನಾ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆ ಎಂದು ಜಿ.ಎಸ್. ಬಸವರಾಜು ಟೀಕಿಸಿದರು.ವ್ಯವಸ್ಥಾಪನಾ ಸಮಿತಿ ರಚಿಸಲು ಆ ದೇವಸ್ಥಾನದ ವಾರ್ಷಿಕ ಆದಾಯ ಒಂದು ಲಕ್ಷ ರೂ. ಮೀರಿರಬೇಕು. ಆದರೆ ರಾಮಮಂದಿರದಲ್ಲಿ ಆ ಪ್ರಮಾಣದ ಆದಾಯವಿಲ್ಲ, ಈ ದೇವಸ್ಥಾನದ ಬಗ್ಗೆ ಇಲಾಖೆಯಲ್ಲಿ ದಾಖಲೆಗಳೇ ಇಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ, ಕಾನೂನಿಗೆ ವಿರುದ್ಧವಾಗಿ ಜಿಲ್ಲಾಧಿಕಾರಿಗಳು ರಾಮಮಂದಿರ ವ್ಯವಸ್ಥಾಪನಾ ಸಮಿತಿ ರಚನೆಗೆ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ರಾಷ್ಟಿçÃಯ ಮಾನವ-ಪರಿಸರ ಸಂರಕ್ಷಣಾ ಪಡೆ ಉಪಾಧ್ಯಕ್ಷ ಜಿ.ಕೆ. ಶ್ರೀನಿವಾಸ್, ವಿಜಯಕುಮಾರ್ ಹಾಜರಿದ್ದರು.