ಆಯೋಗದ ಸದಸ್ಯನಾಗಿ ಇಂದು ಕೊನೆಯ ದಿನ.ಆತ್ಮೀಯರೇ ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ 19.03.2023 ರಂದು ಸರ್ಕಾರ ನನ್ನನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಿತ್ತು
ಆಯೋಗದ ಸದಸ್ಯನಾಗಿ ಇಂದು ಕೊನೆಯ ದಿನ.ಆತ್ಮೀಯರೇ ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ 19.03.2023 ರಂದು ಸರ್ಕಾರ ನನ್ನನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಿತ್ತು

ಆಯೋಗದ ಸದಸ್ಯನಾಗಿ ಇಂದು ಕೊನೆಯ ದಿನ.ಆತ್ಮೀಯರೇ ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ 19.03.2023 ರಂದು ಸರ್ಕಾರ ನನ್ನನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಿತ್ತು. ಇಂದಿಗೆ ಮೂರು ವರ್ಷ ತುಂಬಿತು. ಕಳೆದ ಮೂರು ವರ್ಷಗಳು ನನ್ನ ಜೀವನದಲ್ಲಿ ಅತ್ಯಂತ ಅರ್ಥಪೂರ್ಣವಾದ, ಕಲಿಕೆಯೂ ಸೇವೆಯೂ ಒಂದಾಗಿದ್ದ ಅಪರೂಪದ ಅಧ್ಯಾಯವಾಗಿದೆ.ರಾಜ್ಯದ ಕಿರಿಯ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿಯೊಂದು ನನ್ನ ಹೆಗಲಿಗೆ ಬಿದ್ದಿದ್ದು ನನ್ನ ಸೌಭಾಗ್ಯವೇ ಸರಿ. ಅದರಲ್ಲೂ ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯ ಸದಸ್ಯನಾಗಿ ಜವಾಬ್ದಾರಿ ಹೊತ್ತು ರಾಜ್ಯದ ಬಹುಪಾಲು ಎಲ್ಲಾ ಜಿಲ್ಲೆಗಳಿಗೆ ಪರಿಶೀಲನಾ ಬೇಟಿ, ಪ್ರಗತಿ ಪರಿಶೀಲನಾ ಸಭೆ, ದೂರುಗಳ ಸ್ವೀಕಾರ, ದೂರುಗಳ ವಿಚಾರಣೆ, ಸಂಕಷ್ಟದಲ್ಲಿನ ಸಾವಿರಾರು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಿಗೆ ನ್ಯಾಯದಾನ ವ್ಯವಸ್ಥೆಗೆ ಚುರುಕು ನೀಡಲಾಯಿತು. ಪ್ರತಿಯೊಂದು ಪ್ರಕರಣ, ಪ್ರತಿಯೊಂದು ಭೇಟಿ, ಪ್ರತಿಯೊಂದು ಸಂವಾದ ನನ್ನನ್ನು ಮತ್ತಷ್ಟು ಸಂವೇದನಾಶೀಲನನ್ನಾಗಿ ಮಾಡಿ, ಸಮಾಜದದಲ್ಲಿ ಮಕ್ಕಳು ಎದುರಿಸುತ್ತಿರುವ ನಿಜವಾದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ.ಮುಂದುವರೆದು 1. ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲೂ ಮಕ್ಕಳ ರಕ್ಷಣಾ ನೀತಿ-2016 (ಪರಿಷ್ಕರಣೆ-2023) ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು 11 ಇಲಾಖೆಗಳ ವ್ಯಾಪ್ತಿಯಿಂದ ಸುತ್ತೋಲೆ ಹೊರಡಿಸಲು ಕ್ರಮಕೈಗೊಳ್ಳಲಾಗಿದೆ. 2. ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೂ ಮಕ್ಕಳ ಸಹಯಾವಾಣಿ ಸಂಖ್ಯೆ 1098 ಅನ್ನು ಪ್ರದರ್ಶಿಸಲು ಸರ್ಕಾರಕ್ಕೆ ಪತ್ರಬರೆದು ಆದೇಶ ಮಾಡಿಸಲಾಗಿದೆ. ಸುಮಾರು 34 ಇಲಾಖೆಗಳು ಈ ಕುರಿತು ಸುತ್ತೋಲೆ ಹೊರಡಿಸಿವೆ.3. ಮಕ್ಕಳ ಅಸಹಜ ಸಾವುಗಳನ್ನು ತಪ್ಪಿಸುವ ಸಂಬಂಧ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಲಾಗಿದೆ. ಅದರಲ್ಲೂ ಶಾಲಾ ಆವರಣಗಳಲ್ಲಿ ಮಕ್ಕಳು ವಿದ್ಯುತ್ ಅವಘಡಗಳಿಂದ ಮಕ್ಕಳು ಸಾವನ್ನಪುವ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟಲಾಗಿದೆ.4. ನೀರಿನಲ್ಲಿ ಮುಳುಗಿ ಮಕ್ಕಳು ಸಾವನ್ನಪುö್ಪವ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟುವ ಸಂಬಂಧ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಲಾಗಿದೆ. ಕೃಷಿ ಹೊಂಡಗಳಿಗೆ ಪೆನ್ ಸಿಂಗ್ ಮಾಡಿಸಲು ಸುತ್ತೋಲೆ ಹೊರಡಿಸುವಂತೆ ಕ್ರಮವಹಿಸಲಾಗಿದೆ.5. ನವಜಾತ ಶಿಶುಗಳ ಹಾರೈಕೆ ಮತ್ತು ಚಿಕಿತ್ಸೆ ಬಲಪಡಿಸಲು ಆರೋಗ್ಯ ಇಲಾಖೆಯೊಡನೆ ಕಾರ್ಯನಿರ್ವಹಿಸಲಾಗಿದೆ. ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯನ್ನು ಪರಿಶೀಲನೆ ಮಾಡಿ ಭ್ರೂಣ ಹತ್ಯೆಯನ್ನು ತಡೆಯುವಲ್ಲಿ ಕ್ರಮವಹಿಸಲಾಗಿದೆ.6. ಕಾರಾಗೃಹಗಳಲ್ಲಿ ಬಂದಿತರಾಗಿರುವ ಬಂದಿಗಳ ಮಕ್ಕಳ ಯೋಗಕ್ಷೇಮ ಕಾಪಾಡುವಲ್ಲಿ ಅವರ ಸಮಗ್ರ ಸಮಿಕ್ಷೆ ನಡೆಸಿ ಅವರನ್ನು ಮಿಷನ್ ವಾತ್ಯಲ್ಯ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.7. ತಾಲ್ಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಿ ತಾಲ್ಲೂಕು ಆಡಳಿತಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.8. ತಳಮಟ್ಟದಲ್ಲಿ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಗಳನ್ನು ಬಲಪಡಿಸಲು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಲಾಗಿದೆ.9. ಶಾಲೆಯಲ್ಲಿ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಾಲೆಯಲ್ಲಿರಲಿ ಶಿಕ್ಷಣದ ಜೊತೆಗೆ ರಕ್ಷಣೆ ಎಂಬ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ.10. ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ದತಿಯನ್ನು ಸಮರ್ಥವಾಗಿ ತಡೆಗಟ್ಟಲು “ಬಾಲ ಮತ್ತು ಹದಿಹರೆಯದವರ ಕಾರ್ಮಿಕ ಪದ್ದತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ-1986 ರ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.11. ಮಕ್ಕಳ ನಾಪತ್ತೆ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ.12. ರಾಜ್ಯದ ಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.13. ನಗರ ಪ್ರದೇಶದಲ್ಲಿನ ಮಕ್ಕಳ ಹಕ್ಕುಗಳ ರಕ್ಷಣೆಯ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಕಾವಲು ಸಮಿತಿಗಳನ್ನು ರಚಿಸುವುದು ಹಾಗೂ ವಾರ್ಡ್ ಮಟ್ಟದ ಮಕ್ಕಳ ಹಕ್ಕುಗಳ ಸಭೆಗಳನ್ನು ನಡೆಸಲು ನಿರ್ದೇಶನ ನೀಡುವ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.14. ಮಕ್ಕಳ ಆನ್‌ಲೈನ್ ಸುರಕ್ಷತೆ, ಸೆಲ್‌ಫೋನ್ ಮತ್ತು ಇಂಟರ್‌ನೆಟ್ ಅಡಿಕ್ಷನ್ ನಿಯಂತ್ರಣ, ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಮಗ್ರ ಕ್ರಮಗಳನ್ನು ಕೈಗೊಳ್ಳಲು ಐಟಿಬಿಟಿ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.15. ಕರ್ನಾಟಕದಲ್ಲಿ ಮಕ್ಕಳ / ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸಲು ಸಾರಿಗೆ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.16. ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳ ರಕ್ಷಣೆಗೆ ಸಮಗ್ರ ಆಡಳಿತಾತ್ಮಕ, ಕಾನೂನಾತ್ಮಕ ಹಾಗೂ ಮಾನಸಿಕ ಬೆಂಬಲ ವ್ಯವಸ್ಥೆಗಳನ್ನು ಜಾರಿಗೆ ತರುವ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಇದಲ್ಲದೆ, ಬಾಲ್ಯ ವಿವಾಹ, ಬಾಲ ಗರ್ಭಿಣಿ, ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು ಹೀಗೆ ರಾಜ್ಯದಲ್ಲಿ ಮಕ್ಕಳನ್ನು ಬಾದಿಸುತ್ತಿರುವ ಹಲವು ಸವಾಲುಗಳಿಂದ ರಕ್ಷಣೆ ಮಾಡುವಲ್ಲಿ ಆಯೋಗ ರಚನಾತ್ಮಕವಾಗಿ ಕಾರ್ಯನಿರ್ವಹಿಸಿದೆ.ನನ್ನ ಕ್ಷೇತ್ರಬೇಟಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳ ಅವಲೋಕನದ ಅಂಶಗಳನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸುಮಾರು 32 ಪತ್ರ ಬರೆದಿದ್ದೇನೆ. ಅದನ್ನು ಆಧರಿಸಿ ಸರ್ಕಾರದ 31 ಇಲಾಖೆಗಳು 76 ಸುತ್ತೋಲೆ ಹೊರಡಿಸಿದ್ದು ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.ಮಕ್ಕಳ ಹಕ್ಕುಗಳ ರಕ್ಷಣೆ ಎಂಬುದು ಕೇವಲ ಒಂದೆರಡು ಇಲಾಖೆಯ ಜವಾಬ್ದಾರಿಯಲ್ಲ ಇಡೀ ಸರ್ಕಾರ ಹಾಗೂ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕೆಂಬ ವ್ಯಾಪಕ ಅರಿವು ಮೂಡಿಸುವಲ್ಲಿ ಮಾಡಿದ ನನ್ನ ಪ್ರಯತ್ನ ತೃಪ್ತಿ ತಂದಿದೆ. ಸಾರ್ವಜನಿಕರು, ಪತ್ರಕರ್ತರು, ಸಂತ್ರಸ್ಥರು ನೂರಾರು ದೂರುಗಳನ್ನು ಆಯೋಗದ ಗಮನಕ್ಕೆ ತಂದಿದ್ದಾರೆ, ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಆಯೋಗಕ್ಕಿರುವ ಮಿತಿಯಿಂದಾಗಿ ಇನ್ನೂ ಅನೇಕ ಪ್ರಕರಣಗಳಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ.ಈ ಹುದ್ದೆ ಕೇವಲ ಗೌರವದ ಹುದ್ದೆ. ಇದಕ್ಕೆ ಯಾವುದೇ ವೇತನವಿಲ್ಲ. ಕಿ.ಮಿಗೆ ೩ರೂ ಪ್ರಯಾಣ ಭತ್ಯೆ ಎಲ್ಲಿಯಾದರೂ ವಾಸ್ತವ್ಯ ಹೂಡಿದರೆ 500/ ರೂ ದಿನ ಭತ್ಯೆ, ಸಭೆ ಅಥವಾ ಪ್ರಕರಣಗಳ ವಿಚಾರಣೆಗೆ ಭಾಗವಹಿಸಿದರೆ 1500/ ಗೌರವಧನ ನೀಡಲಾಗುತ್ತದೆ. ಒಟ್ಟಾರೆ ಒಂದು ತಿಂಗಳಿಗೆ ಒಬ್ಬ ಆಯೋಗದ ಸದಸ್ಯನಿಗೆ ಮಾಸಿಕ 6 ರಿಂದ 7 ಸಾವಿರ ರೂ ಸಿಗಬಹುದು. ಇದಕ್ಕಾಗಿ ನಾನು ಕೈತುಂಬ ವೇತನವಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದೆ. ಈ ಮೂರು ವರ್ಷಗಳಲ್ಲಿ ನಾನು ಕಳೆದಕೊಂಡ ವೇತನ ಸುಮಾರು 26 ಲಕ್ಷ. ಇಲ್ಲಿ ಯಾವುದೇ ವೇತನ ನೀಡಲಾಗುವುದಿಲ್ಲವೆಂದು ತಿಳಿದೇ ಇಲ್ಲಿಗೆ ಬಂದಿದ್ದೆಯಾದ್ದರಿಂದ ನನಗೆ ಯಾವುದೇ ಬೇಸರವಿಲ್ಲ, ಅತೃಪ್ತಿಯಿಲ್ಲ. ಬದಲಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಈ ಜವಾಬ್ದಾರಿ ಅಗಾದವಾದ ತೃಪ್ತಿ ತಂದಿದೆ. ಇದನ್ನು ಬರೆಯುವ ಅಗತ್ಯವಿರಲಿಲ್ಲ. ಆದರೆ ಸಾಕಷ್ಟು ಜನರಿಗೆ ಈ ಹುದ್ದೆಗೆ ಲಕ್ಷಾಂತರ ಸಂಬಳ ಬರುತ್ತದೆ ಎಂಬ ಭಾವನೆ ಇದೆ. ಅದಕ್ಕಾಗಿ ಬರೆಯಬೇಕಾಯಿತು ಅಷ್ಟೆ.ನನ್ನ ಈ ಮೂರು ವರ್ಷಗಳ ಪಯಣದಲ್ಲಿ ಸಹಕರಿಸಿದ ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಹಿತೈಷಿಗಳಿಗೆ, ನನ್ನ ಕುಟುಂಬದ ಸದಸ್ಯರಿಗೆ, ಪತ್ರಕರ್ತರಿಗೆ, ಸಾರ್ವಜನಿಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಬೆಂಬಲ, ನಂಬಿಕೆ ಮತ್ತು ಸಹಕಾರವಿಲ್ಲದೆ ಈ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಈ ಪಯಣ ನನಗೆ ದೊಡ್ಡ ಜವಾಬ್ದಾರಿಯುತ ಅನುಭವವನ್ನು ನೀಡಿದೆ.ನನ್ನ ಅಧಿಕಾರಾವಧಿ ಇಲ್ಲಿ ಮುಗಿಯುತ್ತಿದ್ದರೂ, ಮಕ್ಕಳ ಹಿತಾಸಕ್ತಿಗಾಗಿ ನನ್ನ ಬದ್ಧತೆ ಎಂದಿಗೂ ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿಯೂ ಸಮಾಜದ ಒಳಿತಿಗಾಗಿ ಸಾಧ್ಯವಾದಷ್ಟು ನನ್ನ ಕೊಡುಗೆಯನ್ನು ನೀಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಸದಾ ಹೀಗೆ ಇರಲಿ.ಈ ಮೂರು ವರ್ಷಗಳಲ್ಲಿ ನನಗೆ ಸಿಕ್ಕ ಎಲ್ಲಾ ಗೌರವ-ಸಮ್ಮಾನಗಳು, ಟೀಕೆಟಿಪ್ಪಣಿಗಳು, ವಿಮರ್ಶೆಗಳು ಹಾಗೂ ಯಶಸ್ಸುಗಳನ್ನು ಗುರುದೇವ ಸ್ವಾಮಿ ವಿವೇಕಾನಂದರ ಪಾದಕಮಲಗಳಿಗೆ ಅರ್ಪಿಸುತ್ತೇನೆ.ಮುಂದಿನ ಅವಧಿಗೆ ಆಯ್ಕೆಯಾಗುವ ತಂಡಕ್ಕೆ ಶುಭಕೋರುತ್ತೇನೆ. ಹೃತ್ಪೂರ್ವಕ ಧನ್ಯವಾದಗಳು

ಘಾಜಿಯಾಬಾದ್ : ಕೇವಲ 4 ವರ್ಷದ ಮಗುವಿನ ಮೇಲೆ ನೆರೆಮನೆಯ 24 ವರ್ಷದ ಯುವಕನೇ ಅತ್ಯಾಚಾರ ಎಸಗಿ, ಬಳಿಕ ಸಾಕ್ಷ್ಯ ನಾಶಪಡಿಸಲು ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ

4 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆಗೈದ ನೆರೆಮನೆಯ ಕಾಮುಕ.!😡ಘಾಜಿಯಾಬಾದ್ : ಕೇವಲ 4 ವರ್ಷದ ಮಗುವಿನ ಮೇಲೆ ನೆರೆಮನೆಯ 24 ವರ್ಷದ ಯುವಕನೇ ಅತ್ಯಾಚಾರ ಎಸಗಿ, ಬಳಿಕ ಸಾಕ್ಷ್ಯ ನಾಶಪಡಿಸಲು ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಈ ಪೈಶಾಚಿಕ ಕೃತ್ಯ ಎಸಗಲಾಗಿದೆ.ದಿನಗೂಲಿ ಕಾರ್ಮಿಕನಾದ ಬಾಲಕಿಯ ತಂದೆ ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮನೆಗೆ ಬಂದಾಗ ಮಗಳು ಕಾಣೆಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸುತ್ತಮುತ್ತಲ ಮಕ್ಕಳನ್ನು ವಿಚಾರಿಸಿದಾಗ, ಬಾಲಕಿಯನ್ನು ನೆರೆಮನೆಯ ಯುವಕ ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದಿದ್ದ ಎಂದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ ಸುಮಾರು 8:45ರ ಸುಮಾರಿಗೆ ನಿರ್ಜನ ಪ್ರದೇಶದ ಹೊಲವೊಂದರಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಮಗಳ ಬಗ್ಗೆ ವಿಚಾರಿಸಿದಾಗ ಆತ ಸ್ಥಳವನ್ನು ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.ಹೊಲದಲ್ಲಿ ಪತ್ತೆಯಾದ ರಕ್ತಸಿಕ್ತ ದೇಹಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಪೊದೆಗಳ ನಡುವೆ ಬಾಲಕಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಾಲಕಿಯ ತಾಯಿ 2022ರಿಂದಲೇ ಕುಟುಂಬದಿಂದ ಬೇರೆಯಾಗಿದ್ದು, ತಂದೆ ಕೆಲಸಕ್ಕೆ ಹೋದಾಗ ಹಿರಿಯ ಸಹೋದರರೇ ತಂಗಿಯ ಆರೈಕೆ ಮಾಡುತ್ತಿದ್ದರು. ಕೆಲಸದ ಅನಿವಾರ್ಯತೆಯಿಂದ ತಂದೆ ಹೊರಹೋದ ಸಮಯ ನೋಡಿಕೊಂಡು ಕಾಮುಕ ಈ ಹೀನ ಕೃತ್ಯವೆಸಗಿದ್ದಾನೆ.ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಕ್ರೌರ್ಯಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಆರೋಪಿಯ ರಾಕ್ಷಸೀ ಪ್ರವೃತ್ತಿಯನ್ನು ಬಯಲು ಮಾಡಿದೆ. ಬಾಲಕಿಯ ದೇಹದ ಮೇಲೆ ಒಟ್ಟು 11 ಗಾಯಗಳಾಗಿದ್ದು, ತಲೆಯ ಮೇಲೆ ಇಟ್ಟಿಗೆಯಿಂದ ಬಲವಾಗಿ ಹೊಡೆಯಲಾಗಿದೆ. ದೇಹದ ಮೇಲೆ ಕಚ್ಚಿದ ಗುರುತುಗಳು, ಕುತ್ತಿಗೆ ಹಿಸುಕಿದ ಕುರುಹುಗಳು ಹಾಗೂ ಖಾಸಗಿ ಅಂಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದು ವರದಿಯಲ್ಲಿ ದೃಢಪಟ್ಟಿದೆ. ತನ್ನ ಕೃತ್ಯ ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.ಘಟನೆ ತಿಳಿಯುತ್ತಿದ್ದಂತೆಯೇ ಐದು ವಿಶೇಷ ತಂಡಗಳನ್ನು ರಚಿಸಿದ ಘಾಜಿಯಾಬಾದ್ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಆತನ ಮನೆಯ ಸಮೀಪವೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ವಿರುದ್ಧ ಬಿಎನ್ಎಸ್ (BNS) ಸೆಕ್ಷನ್ 103 (ಕೊಲೆ), 238 (ಸಾಕ್ಷ್ಯ ನಾಶ) ಹಾಗೂ ಪೋಕ್ಸೋ (POCSO) ಕಾಯ್ದೆ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಕಲ್ಪಂ ರಂಗೋತ್ಸವದ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನಗಳ ನಾಟಕ ಪ್ರದರ್ಶನ. ಮಂಟೆಸ್ವಾಮಿ ಕಥಾ ಪ್ರಸಂಗ ಕಂದ ಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ ಈ ನಾಟಕ ದೇಶವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿದ್ದು ದಿನಾಂಕ ಮಾರ್ಚ್14 ಮತ್ತು 15ನೇ ತಾರೀಖಿನಂದು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರದರ್ಶನಗೊಂಡಿತು.

ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕಲಾ ಕಲ್ಪಂ (ರಿ), ತುಮಕೂರು
ಆಯೋಜಿಸುತ್ತಿರುವ
ತುಮಕೂರು
ಅಭಿನಯಿಸುವ ನಾಟಕ
ಮಂಟೇಸ್ವಾಮಿ ಕಥಾ ಪ್ರಸಂಗ
“ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ”
( ವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿರುವ ನಾಟಕ)ಕಲ್ಪಂ ರಂಗೋತ್ಸವ
3
ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಎರಡು ದಿನಗಳ ನಾಟಕ ಪ್ರದರ್ಶನ
ದಿನಾಂಕ: ಮಾರ್ಚ್ 14 ಮತ್ತು 15, 2026‌.
ಸ್ಥಳ: ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರ, ತುಮಕೂರು
(ದೇಶ ವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿರುವ ನಾಟಕ)ಕಲ್ಪಂ ರಂಗೋತ್ಸವ

ಸ್ಥಳ: ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರ, ತುಮಕೂರು

ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಕಲ್ಪಂ ರಂಗೋತ್ಸವದ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನಗಳ ನಾಟಕ ಪ್ರದರ್ಶನ. ಮಂಟೆಸ್ವಾಮಿ ಕಥಾ ಪ್ರಸಂಗ ಕಂದ ಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ ಈ ನಾಟಕ ದೇಶವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿದ್ದು ದಿನಾಂಕ ಮಾರ್ಚ್14 ಮತ್ತು 15ನೇ ತಾರೀಖಿನಂದು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರದರ್ಶನಗೊಂಡಿತು.
Oplus_16908288
ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆತುಮಕೂರು, ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿ

ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆತುಮಕೂರು, ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ಜಲಕ್ರೀಡಾ ಕೇಂದ್ರಗಳನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.ಜಿಲ್ಲಾಡಳಿತ, ಪಂಚಾಯತ್, ಯುವ ಸಬಲೀಕರಣ‌ ಮತ್ತು ಕ್ರೀಡಾ ಇಲಾಖೆ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಉದ್ಘಾಟಿಸಿದರು.ನಂತರ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತುಮಕೂರಿನ ಯುವ ಸಮುದಾಯ ಹಾಗೂ ಕ್ರೀಡಾಸಕ್ತರಿಗೆ ಉತ್ತಮ ಸೌಲಭ್ಯಗಳಿರುವ ಕ್ರೀಡಾಂಗಣಗಳ ಅವಶ್ಯ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯಗಳಿರುವ ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣ, ಟೆನ್ನಿಸ್ ಅಂಕಣಗಳನ್ನು ನುರಿತ ಕ್ರೀಡಾ ತಜ್ಞರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ ಎಂದರು.ಅಲ್ಲದೆ ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿ ಇಷ್ಟು ವಿಶಾಲವಾದ ಸುಂದರ ಕೆರೆ ಎಲ್ಲ ಜಿಲ್ಲೆಗಳಲ್ಲಿ ಇಲ್ಲ. ಇರುವ ಅವಕಾಶಗಳನ್ನು ಇಲ್ಲಿ ಬಳಸಿಕೊಂಡ ಜಲಕ್ರೀಡಾ ಸ್ಪರ್ಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದರು. ಬೇಸಿಗೆ ರಜೆಗಳನ್ಮು ವ್ಯರ್ಥವಾಗಿ ಕಳೆಯದೆ ನಮ್ಮ ಜಿಲ್ಲೆಯ ಮಕ್ಕಳು ಅರ್ಥಪೂರ್ಣವಾಗಿ ಕಳೆಯಬೇಕು. ಪೋಷಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.ತುಮಕೂರು ಇತ್ತೀಚಿನ ದಿನಗಳಲ್ಲಿ ಕ್ರೀಡಾ ಹಬ್ ಆಗಿದೆ. ಈಗಾಗಲೇ ಜಿಲ್ಲಾ ಕ್ರೀಡಾ ಹಾಸ್ಟೆಲ್ ಇದ್ದು ಮತ್ತೊಂದು ಕ್ರೀಡಾ ಹಾಸ್ಟೆಲ್ ಸ್ಥಾಪನೆಗೆ ಚಿಂತನೆ ಇದೆ ಎಂದರು.ತುಮಕೂರು ಜಿಲ್ಲಾದ್ಯಂತ ವಿವಿಧ ತಾಲೂಕುಗಳಲ್ಲಿ ನಡೆಯುತ್ತಿರುವಜನಸಂಪರ್ಕ ಸಭೆ ಯಶಸ್ವಿಯಾಗುತ್ತಿದೆ. ಗುಬ್ಬಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಮುಂದಿನ ದಿನಗಳಲ್ಲಿ ಇದನ್ನು ಆಧಾರ್ ಅದಾಲತ್ ರೀತಿಯಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲು ಚಿಂತನೆ ಇದೆ. ಪೌತಿ ಖಾತೆ ಆಂದೋಲನ ಕೂಡ ಹಮ್ಮಿಕೊಳ್ಳಲಾಗುವುದು.ಈ ವಾರದಲ್ಲಿ 10 ಸಾವಿರ ಆನ್ ಲೈನ್ ನಲ್ಲಿ ಪೌತಿ ಖಾತೆ ಮಾಡಿದ್ದೇವೆ. ಜನಸಂಪರ್ಕ ಸಭೆಯಲ್ಲಿಸ್ಥಳದಲ್ಲೇ ಕೆಲವು ಪರಿಹಾರಗಳು ಆಗಿವೆ ಎಂದರು.ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಎಂಟಿಸಿ ನಿಗಮದ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎ.ಅಶೋಕ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶೋಭ ಸಿ., ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆತುಮಕೂರು, ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿ
118ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಿಐಟಿಯು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಅವರಿಗೆ ಜಾಗೃತಿ ಮೆರವಣಿಗೆ
118ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಿಐಟಿಯು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಅವರಿಗೆ ಜಾಗೃತಿ ಮೆರವಣಿಗೆ

118ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಿಐಟಿಯು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಅವರಿಗೆ ಜಾಗೃತಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು ಸಮಾನ ವೇತನ ಮಾತೃತ್ವ ರಜೆ ಮುಟ್ಟಿನ ರಜೆ ಕೇಂದ್ರ ಸರ್ಕಾರದ ನವ ನೀತಿಗಳನ್ನು ಖಂಡಿಸಿ ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಿಸಿ ಮನೆ ಕೆಲಸದವರನ್ನ ಗುರುತಿಸಿ ಎಂಬ ಘೋಷಣೆಯೊಂದಿಗೆ ಮೆರವಣಿಗೆ ಮೂಲಕ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಬಿಸಿಯೂಟ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ ಕಮಲ ಜನವಾದಿ ಮಹಿಳಾ ಸಂಘಟನೆಯ ಟಿಅರ್ ಕಲ್ಪನಾ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಮೀನಾಕ್ಷಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಅನುಸೂಯಮ್ಮ ಗೌರಮ್ಮ ಆಸ್ಪತ್ರೆ ಕಾರ್ಮಿಕರ ಸಂಘದ ನೇತ್ರಾವತಿ ಮಾತನಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ಕಾರ್ಯದರ್ಶಿ ಎಂ ಕೆ ಸುಬ್ರಮಣ್ಯ ರಂಗಧಾಮಯ್ಯ ಗಂಗಾ ಪ್ರೇಮ ಅದಿಲಕ್ಷ್ಮಿ ಬಿಡಿ ಕಾರ್ಮಿಕರ ಸಂಘದ ಶಾಹಿಸ್ತ ಪರ್ವೀನ್ ಮನೆ ಕೆಲಸಗಾರರ ಸಂಘದ ಅನುಸೂಯ ಮುನ್ಸಿಪಲ್ ಕಾರ್ಮಿಕರ ಸಂಘ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.

ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿತುಮಕೂರು ಮಾ. 13 : ಡಾ.ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು ಶಿಕ್ಷಣ ಅಭ್ಯಾಸವಾಗಿ ನೋಡಿದ್ದಾರೆ

ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿತುಮಕೂರು ಮಾ. 13 : ಡಾ.ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು  ಒಂದು ಶಿಕ್ಷಣ ಅಭ್ಯಾಸವಾಗಿ ನೋಡಿದ್ದಾರೆ. ಇವೆರಡನ್ನೂ ಒಂದೇ ಪುಸ್ತಕದಲ್ಲಿ ತರುವುದು ಬಹಳ ವಿಶಿಷ್ಟವಾಗಿದೆ. ಇದು ಶಿಕ್ಷಕರಿಗೆ ಮತ್ತು ಮಹತ್ವಾಕಾಂಕ್ಷಿ ಶಿಕ್ಷಕರಿಗೆ ಸಮಗ್ರ ಜ್ಞಾನವನ್ನು ನೀಡುತ್ತದೆ ಎಂದು  ಚಾಣಕ್ಯ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವಿಭಾಗದ ನಿರ್ದೇಶಕರಾದ ಡಾ. ಪದ್ಮಾವತಿ ಹೇಳಿದರು.ನಗರದ ಕನ್ನಡ ಭವನದಲ್ಲಿ  ಆಕಾಶಗಂಗಾ ಚಾರಿಟಬಲ್ ಟ್ರಸ್ಟ್ (ರಿ),ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೆ.ಎಸ್.ಇ.ಎಫ್ ಶಿಕ್ಷಣ ಮಹಾವಿದ್ಯಾಲಯ  ಸಹಯೋಗದಲ್ಲಿ ಆಯೋಜಿಸಿದ್ದ ಡಾ.ರಾಜಣ್ಣ ಎಸ್. ಪಿ ಅವರ ಸೂಕ್ಷ್ಮ ಬೋಧನಾ ಕೌಶಲ್ಯಗಳು & ಶಿಕ್ಷಕ ತರಬೇತಿ ತಿಳುವಳಿಕೆ ಶಿಸ್ತು ಮತ್ತು ಶಿಕ್ಷಣಶಾಸ್ತ್ರ ಗಣಿತ ಕೃತಿಗಳ ಜನರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ,ಗಣಿತಶಾಸ್ತ್ರದಲ್ಲಿ ಶಿಸ್ತು ಮತ್ತು ಶಿಕ್ಷಣಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು’ – ಇದು ನನಗೂ ಸ್ವಲ್ಪ ಜಟಿಲವಾಗಿದೆ. ಏಕೆಂದರೆ ಗಣಿತದ ಭಯ. ಈ ಗಣಿತದ ಭಯ ನಮ್ಮೆಲ್ಲರಲ್ಲೂ ಇದೆ. ವಿಶೇಷವಾಗಿ l ತರಗತಿಗಳಲ್ಲಿ  ಸಂಖ್ಯೆಗಳು ನಮಗೆ ತುಂಬಾ ಜಟಿಲವಾಗಿವೆ ಎಂದು  ಭಾವಿಸಿದರೆ, ಉಳಿದವುಗಳು  ನಮ್ಮ ಜೀವನದಲ್ಲಿ  ಆ ಗಣಿತದ ಭಯದಲ್ಲಿ ಬದುಕುತ್ತಿದ್ದೇವೆ,ಈ ಪುಸ್ತಕದೊಂದಿಗೆ ಬಹುಶಃ ಈ ಗಣಿತದ ಭಯವನ್ನು ಪರಿಹರಿಸಲು ಪ್ರಯತ್ನಿಸಿರಬಹುದು. ​ಗಣಿತವು ನಮಗೆ ಭಯವಾಗಲು ಕಾರಣ, ವಿಶೇಷವಾಗಿ, ಗಣಿತವು ಅಮೂರ್ತ ವಿಷಯವಾಗಿದೆ. ಇದು ಯಾವುದೇ ಇತರ ವಿಷಯದಂತೆ ನಮಗೆ ಸುಲಭವಾಗಿ ಮತ್ತು ಅರ್ಥವಾಗುವಂತೆ ಬರುವ ವಿಷಯವಲ್ಲ. ಗಣಿತವು ಇನ್ನೂ ಕಷ್ಟಕರವಾಗಿರುವುದು ಏಕೆ ನಾವು ಅನುಸರಿಸುವ ಶಿಕ್ಷಣಶಾಸ್ತ್ರ. ತರಗತಿಗಳಿಂದ ನಮ್ಮ ಶಾಲಾ ಶಿಕ್ಷಣದಲ್ಲಿ ಗಣಿತ ಶಿಕ್ಷಣವನ್ನು ಹೇಗೆ ಮಾಡಲಾಗಿದೆ, ನಮ್ಮಲ್ಲಿ  ಭಯವನ್ನು ನಿಭಾಯಿಸುವ ಬದಲು, ಅದನ್ನು ಎದುರಿಸುವ ಬದಲು, ಅದನ್ನು ಹೆಚ್ಚಿಸುವ ಶಿಕ್ಷಣಶಾಸ್ತ್ರವನ್ನು ನಾವು ಅನುಸರಿಸುತ್ತಿದ್ದೇವೆ. ವಿಶೇಷವಾಗಿ ಅದು ವಯಸ್ಸಿಗೆ ಸೂಕ್ತವಾದ ಶಿಕ್ಷಣಶಾಸ್ತ್ರವಲ್ಲದಿದ್ದರೆ, ಗಣಿತ ಇನ್ನಷ್ಟು ಕಷ್ಟಕರವಾಗುತ್ತದೆ .​ಆದ್ದರಿಂದ ಈ ವಿಷಯದಲ್ಲಿ, ‘ಗಣಿತದಲ್ಲಿ ಶಿಸ್ತು ಮತ್ತು ಶಿಕ್ಷಣಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು’ ಎಂಬ ಪುಸ್ತಕವು ತನ್ನ ಪುಸ್ತಕದಲ್ಲಿ ಗಣಿತದ ವಿಷಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಅದಕ್ಕೂ ಮೊದಲು ಅವರು ಸೈದ್ಧಾಂತಿಕ ಪರಿಕಲ್ಪನೆಗಳೊಂದಿಗೆ ವ್ಯವಹರಿಸುವ ಶುದ್ಧ ಗಣಿತದ ನಡುವಿನ ವ್ಯತ್ಯಾಸವೇನು ಎಂದು ತಿಳಿಸಿದ್ದಾರೆ. ​ಹಲವು ಶಾಲಾ ಮಕ್ಕಳು ಪೈಥಾಗರಸ್ ಪ್ರಮೇಯ, ಇತರ ಕೆಲವು ಗಣಿತ ಸಿದ್ಧಾಂತ, ತ್ರಿಕೋನಮಿತಿ, ರೇಖಾಗಣಿತವನ್ನು  ಏಕೆ ಕಲಿಸುತ್ತಿದ್ದಾರೆಂದು ಸಮರ್ಥಿಸಿಕೊಂಡರೆ, ಗಣಿತವನ್ನು ಕಲಿಯುವುದು ಬಹುಶಃ ಸುಲಭವಾಗುತ್ತದೆ, ಇದನ್ನು ಈ ಪುಸ್ತಕದಲ್ಲಿ ಚೆನ್ನಾಗಿ ವಿವರಿಸಿದ್ದಾರೆ.​ಈ ಪುಸ್ತಕದಲ್ಲಿ ಬರುವ ಇನ್ನೊಂದು ವಿಷಯವೆಂದರೆ ಗಣಿತವು ಇತರ ವಿಷಯಗಳೊಂದಿಗೆ ಹೇಗೆ ಪರಸ್ಪರ ಸಂಬಂಧ ಹೊಂದಿದೆ. ಗಣಿತವನ್ನು ಹಂತ ಹಂತವಾಗಿ ಹೇಗೆ ಕಲಿಸಬೇಕು, ಶಿಕ್ಷಣ ವಿಧಾನಗಳು ಯಾವುವು ಎಂಬುದನ್ನು ಚೆನ್ನಾಗಿ ತಿಳಿಸಿದ್ದಾರೆ ಎಂದು ಹೇಳಿದರು.ಕೆ. ಎಸ್. ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಹರೀಶ್ ಮಾತನಾಡಿ,ಕನ್ನಡ ಸಾಹಿತ್ಯದಲ್ಲಿ ಹಲವಾರು  ಹೆಚ್ಚು ಜನರು ಬಗ್ಗೆ ಆಸಕ್ತಿಗಳನ್ನ ತೋರಿಸ್ತಾ, ವ್ಯಕ್ತಿತ್ವ ವನ್ನು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ   ಬೆಳೆಸಿಕೊಳ್ಳುತ್ತಾರೆ, ಆದರೆ ಶಿಕ್ಷಕರ ಶಿಕ್ಷಣ ಕಡೆ ಹೆಚ್ಚು ಜನ ಗಮನ ಹರಿಸುವುದಿಲ್ಲ, ಶಿಕ್ಷಕರ ಶಿಕ್ಷಣ ಅಂತಕ್ಕಂತದ್ದು ತುಂಬಾ ಅತ್ಯಮೂಲ್ಯವಾದದ್ದು. ಮಾನಸಿಕವಾಗಿ, ದೈಹಿಕವಾಗಿ, ಶಾರೀರಿಕವಾಗಿ,  ಯಾವ ರೀತಿ ಬೋಧನಾ ವಿಧಾನಗಳನ್ನ, ಚಟುವಟಿಕೆಗಳನ್ನ  ಶಿಕ್ಷಕರ ಶಿಕ್ಷಣದಲ್ಲಿ ಹೆಚ್ಚಿನ ಮಹತ್ವವನ್ನ ಕಾಣಬಹುದು.ಡಾ. ಎಸ್.ಪಿ. ರಾಜಣ್ಣನವರು ಬರೆದ ಈ ಎರಡು ಪುಸ್ತಕಗಳು ಪಠ್ಯಕ್ರಮ ಆಧಾರಿತ ವಿಷಯಗಳ ಕುರಿತು ಪ್ರಕಟವಾದ ಕೆಲವೇ ಪುಸ್ತಕಗಳಲ್ಲಿ ಸೇರಿವೆ,​ನಿರ್ದಿಷ್ಟವಾಗಿ ಅವರು ಶಿಕ್ಷಕರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಸಿದ್ದಲಿಂಗಪ್ಪ ಕೆ ಎಸ್,  ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನಿರ್ಮಲಾ ಸಿ. ಎಲ್, ತುಂಬಾಡಿ ರಾಮಯ್ಯ,ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕರಾದ ಕೃಷ್ಣಪ್ಪ ಹೆಚ್,ಉಪ ನಿರ್ದೇಶಕರಾದ ​ಶ್ರೀ ಮಂಜುನಾಥ್ , ನಿವೃತ್ತ ಬಿ. ಇ. ಒ.ರಾದ ​ಶಿವಕುಮಾರ್ ಹೆಚ್,ಪದವಿ ಪೂರ್ವ ಶಿಕ್ಷಣ ಇಲಾಖೆಯ ​ಉಪನ್ಯಾಸಕರಾದ ಸುಜಾತಾ, ಇಕ್ಬಾಲ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು.

ದಿನಾಂಕ 10/3/2026 ರಂದು ಫ್ರೀಡಂ ಪಾರ್ಕ್ ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಧ್ವನಿ ದಲಿತ ಮಹಿಳೆಯರ ಘನತೆಗಾಗಿ ಆಗ್ರಹಿಸಿ ಪ್ರತಿಭಟನಾ ಸಭೆಯನ್ನ SCSA/ TSA ಜಾಗೃತ ಸಮಿತಿ ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಯಿತು
ದಿನಾಂಕ 10/3/2026 ರಂದು ಫ್ರೀಡಂ ಪಾರ್ಕ್ ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಧ್ವನಿ ದಲಿತ ಮಹಿಳೆಯರ ಘನತೆಗಾಗಿ ಆಗ್ರಹಿಸಿ ಪ್ರತಿಭಟನಾ ಸಭೆಯನ್ನ SCSA/ TSA ಜಾಗೃತ ಸಮಿತಿ ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಯಿತು

ದಿನಾಂಕ 10/3/2026 ರಂದು ಫ್ರೀಡಂ ಪಾರ್ಕ್ ನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಧ್ವನಿ ದಲಿತ ಮಹಿಳೆಯರ ಘನತೆಗಾಗಿ ಆಗ್ರಹಿಸಿ ಪ್ರತಿಭಟನಾ ಸಭೆಯನ್ನ SCSA/ TSA ಜಾಗೃತ ಸಮಿತಿ ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಯಿತು.ಮಹಿಳಾ ಹೋರಾಟಗಾರರಾದ ರಾಮಕ್ಕ ಪ್ರತಿಭನಾ ಸಭೆಯನ್ನು ಉದ್ದೇಶಿಸಿ SCSA/TSAನಲ್ಲಿ ದಲಿತ ಮಹಿಳೆಯರ ಸಮಗ್ರವಾದ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಹಣ ಮೀಸಲಿಡುವಂತೆ ಆಗ್ರಹಿಸಿದರು. ಪ್ರತಿಭಟನಾ ಸಭೆಯಲ್ಲಿ ಅನೇಕ ಹಕ್ಕೋತ್ತಾಯಗಳನ್ನು ಮಂಡಿಸಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, SCSA/TSA ಜಾಗೃತ ಸಮಿತಿಯ ವೆಂಕಟೇಶ್, ಮೀನಾ, ವಿಜಯ ಕುಮಾರಿ, ಸೌಮ್ಯ, ಇಂದ್ರ, ಮೇರಿ, ಶೋಭಾರಾಣಿ, ಅನಿತಾ, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಹಲವರು ಉಪಸ್ಥಿತರಿದ್ದರು.

ಗಂಡ ಹೆಂಡತಿ ಮೃತಪಟ್ಟರ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳು
ಗಂಡ ಹೆಂಡತಿ ಮೃತಪಟ್ಟರ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳು

ಕಟ್ಟಡ ಕುಸಿದು ಇಬ್ಬರು ಗಂಡ,ಹೆಂಡತಿ ದುರ್ಮರಣ ಯಲಗಟ್ಟಾ: ಹಟ್ಟಿ ಚಿನ್ನದ ಗಣಿ ರೋಡಲಬಂಡ (ತವಗ )ಪಂಚಾಯತಿ ವ್ಯಾಪ್ತಿಯ ಯಲಗಟ್ಟಾ ಗ್ರಾಮದಲ್ಲಿ ಘಟನೆ,ಮನೆ ಕಟ್ಟಡ ಕೆಲಸ ಮಾಡುವ ಇಬ್ಬರು ಗಂಡ ಹೆಂಡತಿ ಮನೆ ಬಾಗಿಲೇ ಮುಂದಿನ ಕುಂಬೆ ಕುಸಿದು ಸಾವನಪ್ಪಿದ ಘಟನೆ ಯಲಗಟ್ಟಾದಲ್ಲಿ ನಡೆದಿದೆ,ಕುಂಬಿಯ ಅರಭಸಕ್ಕೆ ಸೆಲ್ಫ್ ಮುರಿದುಕೊಂಡ ಬಿದ್ದ ಕಾರಣ ಮೆಟ್ಟಿಲುಗಳು ಮುರಿದುಕೊಂಡು ಹೋಗಿವೆ.ಸ್ಥಳಕ್ಕೆ ಪರಿಶೀಲನೆಗೆ ಭೇಟಿ ನೀಡಿದ ಪೊಲೀಸ್ ಹಟ್ಟಿ ಚಿನ್ನದ ಗಣಿ ಠಾಣೆಯ ಪಿಎಸ್ಐ ಧರ್ಮಣ್ಣ, ಮತ್ತು ಎಎಸ್ಐ ರಹಿಮಾನ್ ಸಾಬು ಮತ್ತು ನಾರಾಯಣ್ಣ ಪೊಲೀಸ್ ,ಮೂಲಕ ಜಾಗ ಪರಿಶೀಲನೆ ಮತ್ತು ಬಾಡಿ ಪೋಸ್ಟ್ ಮರಣ ಪರೀಕ್ಷೆ ಮಾಡಲು ಲಿಂಗಸುಗೂರು ತಾಲೂಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಮೃತಪಟ್ಟ ವ್ಯಕ್ತಿ ದ್ಯಾವಣ್ಣ ತಂದೆ ಮುದುಕಪ್ಪ( ಕೆರೆ)38 ಮತ್ತು ಹೆಂಡತಿ ಶಿವಮ್ಮ34 ಇಬ್ಬರೂ ದುರ್ಮರಣ ಹೊಂದಿದ್ದಾರೆ. ಬೆಳಗ್ಗೆ 10:30 ಸಮಯ ಸೋಮವಾರ ದಿನ ರೆಡ್ಡಪ್ಪ ತಂ ನಿಂಗಪ್ಪ ಹಡಪದ ಅವರ ಮನಿ ಕೆಲಸ ಮಾಡಲು ಹೋಗಿದ್ದ ಕಾರ್ಮಿಕರು ಮನೆ ಮುಂದಿನ ಬಾಗಿಲು ಡಿಸೈನ್ ಮಾಡಲು ಹೋಗಿ ಮನೆ ಮುಂದಲಿನ ಶಲ್ಫು ಕುಂಬೆ ಕುಸಿದು ಗಂಡ ಹೆಂಡತಿ ಸಾವನ್ನಪ್ಪಿದ ಘಟನೆ ಜರುಗಿದೆ,ಇಬ್ಬರು ಮಕ್ಕಳು ಬಿಟ್ಟು ಅಗಲಿದರೆ, ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಅಕ್ರಂದನ ಮುಗಿಲು ಮುಟ್ಟಿದೆ ಈ ಪ್ರಕರಣವನ್ನು ಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘CIDECODE’ 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಮಾನ್ಯ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ರವರು ಉದ್ಘಾಟಿಸಿದರು

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘CIDECODE’ 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಮಾನ್ಯ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ರವರು ಉದ್ಘಾಟಿಸಿದರು.ಸೈಬರ್ ಅಪರಾಧಗಳನ್ನು ತನಿಖೆ ಮಾಡಲು ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಅಗತ್ಯವಾದ ಕೌಶಲ್ಯ, ತರಬೇತಿ ಮತ್ತು ತಂತ್ರಜ್ಞಾನದೊಂದಿಗೆ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರವು ಸೈಬರ್ ಅಪರಾಧಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ನಮ್ಮ ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.ರಾಜ್ಯದಲ್ಲಿ ಸಿಸಿಐಟಿಆರ್ ಸ್ಥಾಪನೆಯಿಂದ ಸೈಬರ್ ಕ್ರೈಮ್ ತನಿಖೆಯನ್ನು ಬಲಪಡಿಸುವುದು, ಸಂಶೋಧನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಸುಧಾರಿತ ತಾಂತ್ರಿಕ ಕೌಶಲ್ಯಗಳಿಂದ ಸಜ್ಜುಗೊಳಿಸಲು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ.‌ ಈ ಕೇಂದ್ರದಿಂದ ಹೊರಹೊಮ್ಮುತ್ತಿರುವ ಸಂಶೋಧನಾ ಪ್ರಕಟಣೆಗಳು ಮತ್ತು ಸಾಮರ್ಥ್ಯವರ್ಧನಾ ಉಪಕ್ರಮಗಳು ಸೈಬರ್ ಪೊಲೀಸ್ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ ಗೋಡ್ಸೆ ಮುಂತಾದವರು ಉಪಸ್ಥಿತರಿದ್ದರು.

ಫಿಲ್ಮಿ ಸ್ಟೈಲ್‌ನಲ್ಲಿ ಕಾರಿನಲ್ಲಿದ್ದ ಹಣದ ಬ್ಯಾಗ್​​ ಎಗರಿಸಿ ಎಸ್ಕೇಪ್‌ ಆಗುವಷ್ಟರಲ್ಲಿ ಲಾಕ್‌ ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರು ಥಳಿತ​​. ಚಿಕ್ಕಬಳ್ಳಾಪುರ

ಫಿಲ್ಮಿ ಸ್ಟೈಲ್‌ನಲ್ಲಿ ಕಾರಿನಲ್ಲಿದ್ದ ಹಣದ ಬ್ಯಾಗ್​​ ಎಗರಿಸಿ ಎಸ್ಕೇಪ್‌ ಆಗುವಷ್ಟರಲ್ಲಿ ಲಾಕ್‌ ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರು ಥಳಿತ​​. ಚಿಕ್ಕಬಳ್ಳಾಪುರ: ಸಂಬಂಧಿಕರ ಮದುವೆ ಕಾರ್ಯಕ್ಕಾಗಿ ಚಿನ್ನಾಭರಣವನ್ನು ಒತ್ತೆಯಿಟ್ಟು ಹಣ ತೆಗೆದುಕೊಂಡು ಬೆಂಗಳೂರಿಗೆ ಹೊರಟಿದ್ದ ಕುಟುಂಬವೊಂದರ ಮೇಲೆ ಫಿಲ್ಮಿ ಸ್ಟೈಲ್‌ನಲ್ಲಿ ದರೋಡೆ ಯತ್ನ ನಡೆದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕೆ.ವಿ ಕ್ಯಾಂಪಸ್ ಬಳಿ ನಡೆದಿದೆ.ಆಂಧ್ರ ಮೂಲದ ಉಷಾ ಹಾಗೂ ಅವರ ಇಬ್ಬರು ಮಕ್ಕಳು ಮದುವೆ ಕಾರ್ಯಕ್ಕೆ ಹಣ ನೀಡಲು ಆಂಧ್ರದಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಿದ್ದರು. ದಾರಿ ಮಧ್ಯೆ ಚಿಕ್ಕಬಳ್ಳಾಪುರದ ಬಳಿ ತಿಂಡಿ ತಿನ್ನಲು ಕಾರು ನಿಲ್ಲಿಸಿ ಬಾಗಿಲು ತೆರೆದಿದ್ದಾಗಲೇ ಮೂವರು ಅಪರಿಚಿತ ಯುವಕರು ಕಾರಿನಲ್ಲಿದ್ದ 650.000 ರೂ ಹಣದ ಬ್ಯಾಗ್ ಕದ್ದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.ಈ ವೇಳೆ ಉಷಾ ಅವರ ಮಕ್ಕಳು ಜೋರಾಗಿ ಕೂಗಿದ್ದು, ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಸ್ಥಳೀಯ ಯುವಕರು ಕಳ್ಳರ ಹಿಂದೆ ಬೆನ್ನಟ್ಟಿದ್ದಾರೆ. ಯುವಕರ ಸಹಾಯದಿಂದ ಇಬ್ಬರು ಕಳ್ಳರನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ ಮತ್ತೊಬ್ಬ ಆರೋಪಿ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ.ಕಾರಿನಲ್ಲಿ ಹಣ ಇರುವ ಮಾಹಿತಿ ಕಳ್ಳರಿಗೆ ಹೇಗೆ ತಿಳಿದುಬಂದಿತು ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮತ್ತೊಂದೆಡೆ ಬಂಧಿತ ಆರೋಪಿಗಳು ಕಾರಿನಲ್ಲಿದ್ದವರ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಫಿಲ್ಮಿ ಸ್ಟೈಲ್‌ನಲ್ಲಿ ಕಾರಿನಲ್ಲಿದ್ದ ಹಣದ ಬ್ಯಾಗ್​​ ಎಗರಿಸಿ ಎಸ್ಕೇಪ್‌ ಆಗುವಷ್ಟರಲ್ಲಿ ಲಾಕ್‌ ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರು ಥಳಿತ​​. ಚಿಕ್ಕಬಳ್ಳಾಪುರ
Call Us Now
WhatsApp