ತನ್ವೀರ್ ಸೇಠ್ ರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿ :- ತೇಜಸ್ವಿ ನಾಗಲಿಂಗಸ್ವಾಮಿ ಮೈಸೂರು :- ಮೈಸೂರಿನ ನರಸಿಂಹ ರಾಜ ಕ್ಷೇತ್ರದ ಜನಪ್ರಿಯ ಶಾಸಕರಾದ ತನ್ವೀರ್ ಸೇಠ್ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದಾರೆತನ್ವೀರ್ ಸೇಠ್ ಅವರು ಹಿರಿಯ ಶಾಸಕರಾಗಿದ್ದಾರೆ ಮತ್ತು ಯಾವುದೇ ಕಳಂಕ ಇಲ್ಲದ ರಾಜಕಾರಣಿ ಎಂದು ಕರೆಯಲ್ಪಡುವ ನಾಯಕ ತನ್ವೀರ್ ಸೇಠ್.ಅವರ ತಂದೆ ಕೂಡ ಪ್ರಭಾವಿ ನಾಯಕರಾಗಿದ್ದರು,ತನ್ವೀರ್ ಸೇಠ್ ಅವರು ಯಾವುದೇ ಧರ್ಮ ಜಾತಿ ಎನ್ನದೆ ಎಲ್ಲರನ್ನೂ ಸಮಾನರಾಗಿ ಕಾಣುತ್ತಿರುವುದು ಮತ್ತುಜನಾನುರಾಗಿ ಯಾಗಿರುವ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರನ್ನು ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯಿಸುತ್ತಿದ್ದಾರೆ.ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೈಕಮಾಂಡ್ ಗೆ ತಿಳಿಸಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ರೌಡಿಸಂ ಗೆ ಕಡಿವಾಣ ವಿಶೇಷ ರೌಡಿ ನಿಗ್ರಹ ಪಡೆ ರಚನೆ ತೇಜಸ್ವಿ ನಾಗಲಿಂಗಸ್ವಾಮಿ :- ಸ್ವಾಗತನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ರೌಡಿ ನಿಗ್ರಹ ಪಡೆ ರಚನೆ ಮಾಡಿರುವುದನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದರೆನಾನು ಕೂಡ ಅನೇಕ ವರ್ಷಗಳಿಂದ ರೌಡಿ ಚಟುವಟಿಕೆ ವಿರುದ್ಧ ಹೋರಾಟಗಳನ್ನು ನಡೆಸುತ್ತ ಬಂದಿದ್ದೇನೆ ಮತ್ತು ಅನೇಕ ಬಾರಿ ರಾಜ್ಯ ಸರ್ಕಾರಕ್ಕೆ ಮತ್ತು ಪೋಲಿಸ್ ಇಲಾಖೆಗೆ ರೌಡಿ ನಿಗ್ರಹ ಪಡೆ ಸ್ಥಾಪಿಸುವಂತೆ ಮನವಿ ಕೂಡಾ ಮಾಡಿದ್ದೆಈಗ ರೌಡಿ ನಿಗ್ರಹ ಪಡೆ ರಚನೆ ಆಗಿರುವುದು ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆಈ ರೌಡಿ ನಿಗ್ರಹ ಪಡೆ ರಚನೆ ಇಂದ ಜನ ಸಾಮಾನ್ಯರಿಗೆ ರೌಡಿ ಚಟುವಟಿಕೆ ಇದ್ದವರು ಬೆದರಿಕೆ ಹಾಕುವುದು ಮತ್ತು ಹಫ್ತಾ ವಸೂಲಿ ಮಾಡುವವರು ಮತ್ತು ಸಮಾಜದಲ್ಲಿ ಆತಂಕ ಉಂಟುಮಾಡುವವರ ಎದೆಯಲ್ಲಿ ನಡುಕ ಶುರುವಾಗುತ್ತದೆ ಎಂದಿದ್ದಾರೆಒಟ್ಟಾರೆ ಸರ್ಕಾರದ ಈ ನಿರ್ಧಾರದಿಂದ ರೌಡಿ ಚಟುವಟಿಕೆ ಮಟ್ಟಹಾಕಲು ಅನುಕೂಲ ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ
*ಸಂಘಟಿತ ಹೋರಾಟದಿಂದ ಜಿಲ್ಲೆಯ ಅಲೆಮಾರಿ/ ಅರೆ ಅಲೆಮಾರಿ/ ಹಂದಿಜೋಗಿ ಸಮುದಾಯಗಳಿಗೆ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ರವರಿಂದ ಹಕ್ಕುಪತ್ರ ವಿತರಣೆ ಸ್ಲಂ ಜನಾಂದೋಲನದಿಂದ ಶ್ಲಾಘನೆ*ಇಂದು ತುಮಕೂರು ಜಿಲ್ಲಾಡಳಿತದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳೆದ 50 ವರ್ಷಗಳಿಗೂ ಮೇಲ್ಪಟ್ಟು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬದುಕು ಕಟ್ಟಿಕೊಂಡಿರುವ ತುಮಕೂರು ನಗರದ ಇಸ್ಮಾಯಿಲ್ ನಗರ ಕುಮುಟಯ್ಯನ ಬಡಾವಣೆ ಹಂದಿಜೋಗಿ ಕುಟುಂಬಗಳಿಗೆ ತುಮಕೂರು ತಾಲೂಕು ಊರುಕೆರೆ ಅಣ್ಣೆನಳ್ಳಿ ಹಾಗೂ ಅರಕೆರೆ ಹಕ್ಕಿ ಪಿಕ್ಕಿ ಸಮುದಾಯದ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಅಲೆಮಾರಿ ಮತ್ತು ಅರೆ ಅಲೆಮಾರಿ ಹಂದಿಜೋಗಿ ಸಿಳ್ಳೆಕ್ಯಾತ ಸಮುದಾಯದ 209 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಈ ಸಂಧರ್ಭದಲ್ಲಿ ತುಮಕೂರು ನಗರ ಶಾಸಕರಾದ ಜಿ ಬಿ ಜ್ಯೋತಿಗಣೇಶ್. ಗ್ರಾಮಾಂತರ ಶಾಸಕರಾದ ಸುರೇಶ್ ಗೌಡ. ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್. ADC ತಿಪ್ಪೇಸ್ವಾಮಿ. ಜಿಲ್ಲಾ ಪಂಚಾಯತ್ CEO ಬಿವಿ ಅಶ್ವೀಜ. ಮತ್ತು ಮಹಾನಗರ ಪಾಲಿಕೆಯ ಆಯುಕ್ತರಾದ ಶುಭ. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು. ಹಾಗೂ ತುಮಕೂರು ತಹಶೀಲ್ದಾರ್. ಮುಂತಾದ ಅಧಿಕಾರಿ ವೃಂದದವರು ಮತ್ತು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ. ಉಪಸ್ಥಿತರಿದ್ದರು.ತುಮಕೂರು ಸ್ಲಂ ಸಮಿತಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅಭಿನಂದಿಸಲಾಯಿತು ಸಂವಿಧಾನದ ಸಮಪಾಲು ಸಮಬಾಳು ಆಶಯದ ಸಾಮಾಜಿಕ ನ್ಯಾಯದಂತೆ ಅಲೆಮಾರಿ ಸಮುದಾಯಗಳಿಗೆ ಹಕ್ಕುಪತ್ರ ನೀಡಿರುವುದು ಶ್ಲಾಘನೀಯ ಎಷ್ಟು ಮಹಿಳೆಯಾರ ಹತ್ತಾರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ.ಸರ್ಕಾರ ತುರ್ತು ಲೇಔಟ್ ಮಾಡಿಸಿ ವಿಶೇಷ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ. ನರಸಿಂಹಮೂರ್ತಿ ಅಗ್ರಹಿಸಿದರು
ಬಾಗಿದ ವಿದ್ಯುತ್ ಕಂಬಗಳಿಂದ ಆತಂಕ: ತಕ್ಷಣ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯಲಿಂಗಸುಗೂರು: ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ, ತವಗ, ಯಲಗಟ್ಟಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಲವು ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಮುಖ್ಯ ರಸ್ತೆ ಬದಿಯಲ್ಲಿ ಹಾಗೂ ರೈತರ ಹೋಲದಲ್ಲಿ ಬಾಗಿಕೊಂಡು ನಿಂತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಈ ಬಗ್ಗೆ ಸಂಬಂಧಪಟ್ಟ ವಿದ್ಯುತ್ ಸರಬರಾಜು ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಾಗಿದ ವಿದ್ಯುತ್ ಕಂಬಗಳು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಭೀತಿ ಇದ್ದು, ಇದರಿಂದ ಊರಿನ ಸಾರ್ವಜನಿಕರು ಹಾಗೂ ವಾಹನ ಸಂಚಾರಿಗರು ಭಯಭೀತರಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಅಪಾಯಕಾರಿ ಸ್ಥಿತಿಗೆ ತಕ್ಷಣವೇ ಸ್ಪಂದಿಸಿ, ಬಾಗಿದ ಹಾಗೂ ಜೀರ್ಣಗೊಂಡ ವಿದ್ಯುತ್ ಕಂಬಗಳನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕರ ಜೀವಳಿಸ್ತಿಗೆ ರಕ್ಷಣೆ ಒದಗಿಸಬೇಕೆಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಅನ್ಯಾಯ: ಕಾಂಗ್ರೆಸ್ಸರ್ಕಾರದ ವಿರುದ್ಧ ತೀವ್ರ ಆಕ್ರೋಶಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅನ್ಯಾಯವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರು ತಾಜುದ್ದೀನ್ ಷರೀಫ್ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪರವಾಗಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ.ರಾಜ್ಯದ ಜನಸಂಖ್ಯೆಯಲ್ಲಿ ಗಣನೀಯ ಪಾಲು ಹೊಂದಿರುವ ಹಾಗೂ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯಕ್ಕೆ ಪ್ರಥಮ ಹಂತದ ಸಚಿವ ಸಂಪುಟದಲ್ಲಿ ಕೇವಲ ಒಬ್ಬ ಮುಸ್ಲಿಂ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಸಮುದಾಯದ ಜನಸಂಖ್ಯೆ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಪರಿಗಣಿಸಿದರೆ ಕನಿಷ್ಠ ಎರಡು ಅಥವಾ ಮೂರು ಸಚಿವ ಸ್ಥಾನಗಳನ್ನು ನೀಡಬೇಕಾಗಿತ್ತು.ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯುವ ಸಂದರ್ಭದಲ್ಲಿ ಮಾತ್ರ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಮಾತುಗಳನ್ನು ಹೇಳುವ ಕಾಂಗ್ರೆಸ್, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮುಸ್ಲಿಮರನ್ನು ಕಡೆಗಣಿಸಿರುವುದು ಅದರ ದ್ವಂದ್ವ ನೀತಿಯನ್ನು ಬಯಲಿಗೆಳೆಯುತ್ತದೆ.ಇದು ಕೇವಲ ಪ್ರಾತಿನಿಧ್ಯದ ಪ್ರಶ್ನೆಯಲ್ಲ, ಸಂವಿಧಾನಾತ್ಮಕ ಸಮಾನತೆಯ ಪ್ರಶ್ನೆಯಾಗಿದೆ.ಆದ್ದರಿಂದ, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕನಿಷ್ಠ ನಾಲ್ಕು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸುತ್ತೇವೆ.
ಎಸ್. ಐ.ಆರ್ ಖಂಡಿಸಿ ಕರ್ನಾಟಕ ಪ್ರತಿರೋಧತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಹೋರಾಟ. ಇಂದು ತುಮಕೂರಿನಲ್ಲಿ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಜನಪರ ಸಂಘಟನೆಗಳ ಒಕ್ಕೂಟದಿಂದ ಇತ್ತೀಚೆಗೆ ಮುಖ್ಯ ಚುನಾವಣಾ ಆಯೋಗ SIR ಎಂಬ ಅಸಂವಿಧಾನಿಕ ಪ್ರಜಾತಂತ್ರ ಜನವಿರೋಧಿಯಾದ ಮತದಾನ ಪರಿಷ್ಕರಣ ವಿಧಾನವನ್ನು ಜಾರಿಮಾಡ ಹೊರಟಿದೆ. ಇದು ಜನರ ಮತದಾನದ ಹಕ್ಕು ಕಿತ್ತುಕೊಳ್ಳುವ ಪ್ರಕ್ರಿಯೆಯಾಗಿರುವುದಿಂದ ಕರ್ನಾಟಕ ಪ್ರತಿರೋಧವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪರಿಸರವಾದಿಗಳಾದ ಸಿ.ಯತಿರಾಜು ಮಾತನಾಡಿ 13 ರಾಜ್ಯಗಳಲ್ಲಿ ನಡೆದಿರುವ SIR ನಿಂದ 6 ಕೋಟಿ ಜನರನ್ನು ಮತದಾನದಿಂದ ಹೊರಗಿಡಲಾಗಿದೆ. SIR ಹಿಮ್ಮೆಟಿಸದೆ ಹೋದರೆ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಜನ ಹೋರಾಟದಿಂದ ಇದನ್ನು ಆಗದಂತೆ ನೋಡಿಕೊಳ್ಳಬೇಕು. ಜನಬೆಂಬಲವಿಲ್ಲದೆ ಸರ್ಕಾರ ಅಡ್ಡ ದಾರಿಯಿಂದ ಅಧಿಕಾರ ಹಿಡಿಯ ಹೊರಟಿರುವುದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರ. ಪಿಯುಸಿಎಲ್ ಜಿಲ್ಲಾ ಅಧ್ಯಕ್ಷರಾದ ಕೆ. ದೊರೈರಾಜ್ ಮಾತನಾಡಿ ಮತದಾನ ಎಲ್ಲಾ ಜನಗಳ ಸಂವಿಧಾನಿಕ ಹಕ್ಕು ಇದನ್ನು ಕಿತ್ತುಕೊಳ್ಳಲು ಹಿಡಿದಿರುವ ಹಾದಿ SIR – SIR ಎಂಬ ಪದ ಸಂವಿಧಾನದಲ್ಲಿಯೇ ಇಲ್ಲ . ಸಾರಾಂಶ ಪರಿಷ್ಕರಣೆಗೆ SR ನಮ್ಮ ವಿರೋಧವಿಲ್ಲವೆಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ. ಹ ರಮಾಕುಮಾರಿ ಮಾತನಾಡಿ SIR ಮಾಡಿರುವವರು ಪರೀಕ್ಷಣೆ ವಿಶೇಷವಾದದ್ದು ಕೋಟ್ಯಂತರ ಜನ ನುಸುಳುಕೋರರು ಇದ್ದಾರೆ ಅವರನ್ನು ತೆಗೆಯಲು ಈ ಪ್ರಕ್ರಿಯೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಾ. ಕೆಲವರನ್ನು ಗುರುತಿಸಲು ಉಳಿದ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ಅದಕ್ಕೆ ನಾವು SIR ಅನ್ನು ವಿರೋಧಿಸುತ್ತಿದ್ದೇವೆ ಎಂದರು. ರಾಜ್ಯ ರೈತ ಸಂಘದ ಶಂಕ್ರಪ್ಪ ಮಾತನಾಡಿ ಬಿಜೆಪಿ ಮತ್ತು ಚುನಾವಣಾ ಆಯೋಗ ಸಂವಿಧಾನ ಆಶಯವನ್ನು ಬುಡಮೇಲು ಮಾಡಲು ಹೊರಟಿದೇ. SIR ಒಂದು ಮಾರಕ ಹಸ್ತ್ರ ಮತದಾನದ ಹಕ್ಕಿಗೆ ದಕ್ಕೆ ತರಲು ಬಡಪಾಯಿ ಜನರನ್ನು ದಾಖಲೆ ಕೊಡಲು ಹಿಂಸೆ ಮಾಡಿ ಅವರಿಗೆ ಇದರ ಸಹವಾಸ ಬೇಡವೆಂದು ದೂರ ಸರಿದು ಮತದಾನ ಪಟ್ಟಿಯಿಂದ ಹೊರಗಿಡುವುದು ಜನವಿರೋಧಿ ಹುನ್ನಾರವಾಗಿದೆ ಎಂದರು. CITU ಜಿಲ್ಲಾಧ್ಯಕ್ಷರಾದ ಸಯ್ಯದ್ ಮುಜೀಬ್ ಮಾತನಾಡಿ SIR ಅನ್ನು ತರಲು ಹೊರಟಿರುವವರು ಮನುವಾದಿ ಸಂವಿಧಾನದ ಪ್ರತಿಪಾದನೆಗೆ ಹೊರಟಿದ್ದಾರೆ .ಸುಪ್ರೀಂ ಕೋರ್ಟ್ ತೀರ್ಪುಗಳು ಆಳುವ ಸರ್ಕಾರಗಳ ಡಿಕ್ಟೇಷನ್ ಇದ್ದಂತೆ ಇದೆ ಇದರಿಂದ ಕೇವಲ ಒಂದು ಸಂವಿದಾಯ ಅಲ್ಲ . ಎಲ್ಲಾ ಸಮುದಾಯಗಳು ಮತಾಧಿಕಾರ ಕಳೆದುಕೊಳ್ಳುತ್ತಾರೆ, ಅದಕ್ಕೆ ನಾವೆಲ್ಲರೂ ಸೇರಿ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದರು. ಜಾಗೃತ ಕರ್ನಾಟಕದ ಆದಂ ಖಾನ್ ಮಾತನಾಡಿ ಪರಿಷ್ಕರಣೆ ಹಿಂದೆ ನಡೆಯುತ್ತಿದ್ದಂತೆ ನಡೆಯುತ್ತಿಲ್ಲ ಆದರೆ SIR ನಲ್ಲಿ ಪ್ರತಿಯೊಬ್ಬರು ಹೊಸದಾಗಿ ಸೇರುವುದಕ್ಕೆ ಎನುಮರೇಷನ್ ಫಾರಂ ಕೊಡಲು ಒತ್ತಾಯಿಸುತ್ತಿದ್ದಾರೆ. ಇದು ಎಲ್ಲಾ ಜನಸಾಮಾನ್ಯರಿಗೂ ಸಾಧ್ಯವಾಗುವಂತಹದಲ್ಲ ಇದಕ್ಕೆ ನಮ್ಮ ವಿರೋಧವಿದೆ. ಅದಕ್ಕೆ ಈ ಕರ್ನಾಟಕ ಪ್ರತಿರೋಧ ವೆಂದರು. ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಹೊರಹೋಗದಂತೆ ಮಾಡಲು ಸಹಾಯವಾಗುವ ದಾಖಲೆಗಳನ್ನು ಜನ ನೀಡಲು ಅವರಿಗೆ ಸೂಕ್ತ ಅವಧಿ ನೀಡಿ ಅವರನ್ನು ಮತ ಪಟ್ಟಿಯಲ್ಲೇ ಇರುವಂತೆ ಖಾತ್ರಿಪಡಿಸಬೇಕೆಂದರು .ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಜುದ್ದೀನ್ ಮಾತನಾಡಿ SIR ವಿರೋಧ ಪುಣ್ಯದ ಕೆಲಸ ಜನಸಾಮಾನ್ಯರು ಮತಾಧಿಕಾರ ಕಳೆದುಕೊಳ್ಳದಂತಾಗಲೂ ನಾವೆಲ್ಲ ಸೇರಿ ಹೋರಾಡ ಎಂದರು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿಕ್ ಹಿಂದ್. SDPI. ವಿಜ್ಞಾನ ಕೇಂದ್ರ. ಜನಶಕ್ತಿ. ಎದ್ದೇಳು ಕರ್ನಾಟಕ. ಜಾಗೃತ ಕರ್ನಾಟಕ. SPIM. SUSI. ನಿವೃತ್ತ ನೌಕರರ ಸಂಘ. ಸ್ಲಂ ಜನಾಂದೋಲನ. ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ. ಸಂವಿಧಾನ ಸಂರಕ್ಷಣಾ ಪಡೆ. ಮುಂತಾದ ಸಂಘಟನೆಗಳಿಂದ ಅರುಣ್. ರಾಮಕೃಷ್ಣಪ್ಪ. ಅಕ್ಕಮ್ಮ. ಇಂದಿರಮ್ಮ. AIDSO ಜಿಲ್ಲಾಧ್ಯಕ್ಷರಾದ ಕಲ್ಯಾಣಿ. ಮರಿಯಾಂಬಿ. ಪುಷ್ಪಲತಾ. ಶಿವಲಿಂಗಯ್ಯ. ಮುಂತಾದವರು ಭಾಗವಹಿಸಿದ್ದರು.
ಕಾರ್ಮಿಕರರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿರೂ.೩೬ ಸಾವಿರ ಕನಿಷ್ಠ ವೇತನ, ಖಾಯಂಯೇತರರ ಖಾಯಂಗೆ ಶಾಸನ ಸೇರಿ ೬ ಮುಖ್ಯ ಬೇಡಿಕೆಗಳನ್ನು ಒಳಗೊಂಡ ಸಿಐಟಿಯು ಮೆರವಣಿಗೆತುಮಕೂರು, ಮೇ ೩೦: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ಸಂಜೆ ೩ ಗಂಟೆಗೆ ನಗರದ ಸ್ವತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರ ಮೇ ೨೨ರಂದು ಹೊರಡಿಸಿದ ಏಕರೂಪದ ಕನಿಷ್ಠ ವೇತನ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತಲೇ, ಅದರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿತು.ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಅಧ್ಯಕ್ಷ ಕಾಂ. ಸೈಯದ್ ಮುಜೀಬ್ ಮಾತನಾಡಿ, “ಸುಪ್ರೀಂ ಕೋರ್ಟ್ನ ‘ರೆಪ್ತಕೋಸ್ ಬ್ರೆಟ್’ ಮಾನದಂಡದAತೆ ಕನಿಷ್ಠ ವೇತನ ಪರಿಷ್ಕರಿಸಬೇಕೆಂಬ ಕರ್ನಾಟಕ ಹೈಕೋರ್ಟ್ ನಿರ್ದೇಶನದ ಅನುಸಾರವೇ ಈ ಅಧಿಸೂಚನೆ ಹೊರಬಂದಿದೆ. ಆದರೆ ವೈಜ್ಞಾನಿಕ ಲೆಕ್ಕಾಚಾರಕ್ಕಿಂತ ಕಡಿಮೆ ದರ ನಿಗದಿಯಾಗಿದೆ” ಎಂದರು.ಪ್ರಾಸ್ತಾವಿಕ ನುಡಿಗಳನಾಡಿದ ಸಿಐಟಿಯು ತುಮಕೂರು ಜಿಲ್ಲಾ ಪ್ರಧಾನಕಾರ್ಯಾದರ್ಶಿ ಜಿ.ಕಮಲ್ ಅವರು ಪ್ರಸ್ತುತ ಜೀವನ ವೆಚ್ಚವನ್ನು ಗಮನಿಸಿ ಸರಾಸರಿ ರೂ. ೩೬,೦೦೦ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ದಾರ್ ಬಾನು ಮಾತನಾಡಿ ಎಲ್ಲಾ ಸ್ಕಿಂ ನೌಕರರಾದ ಅಂಗನವಾಡಿ, ಬಿಸಿಯೂಟ,ಆಶಾ,ನೌಕರರನ್ನು ಕಾರ್ಮಿಕರು ಎಂದು ಪ್ರರಿಗಣಿಸಲು ಒತ್ತಾಯಿಸಿದರು.ಗ್ರಾಮಪಂಚಾಯಿತಿ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಎನ್.ಕೆ ಅವರು, “ಕರಡು ಅಧಿಸೂಚನೆ ಹೊರಡಿಸಿದ ದಿನಾಂಕ ೧೧-೦೪-೨೦೨೫ ರಿಂದಲೇ ಪೂರ್ವಾನ್ವಯಗೊಳಿಸದೆ, ಮೇ ೨೨ರಿಂದ ಜಾರಿಗೆ ತಂದಿರುವುದು ಕಾರ್ಮಿಕರಿಗೆ ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್ ಮಾತನಾಡಿ, “ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿದಂತೆ ೧೯ ಉದ್ದಿಮೆಗಳನ್ನು ಹೊರಗಿಟ್ಟಿರುವುದರಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಮಿಕರನ್ನೂ ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು” ಎಂದರು.ತುಮಕೂರು ಮಹಾನಗರ ಪಾಲಿಕೆ ಕಸದ ಆಟೋಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮತ್ತು ಕ್ರಮವಾಗಿ ಅನುಷ್ಠಾನದ ಕಟ್ಟುನಿಟ್ಟು ಹಾಗೂ ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕದಲ್ಲಿ ಕಾರ್ಮಿಕಪರ ತಿದ್ದುಪಡಿಗಳ ಆಗ್ರಹ ವ್ಯಕ್ತಪಡಿಸಿದರು.ಕೈಗಾರಿಕಾ ಕಾರ್ಮಿಕ ಸುಜಿತ್ ನಾಯಕ ಮಾತನಾಡಿ ಗುತ್ತಿಗೆ ಪದ್ಧತಿ ರದ್ದುಪಡಿಸಿ, ಖಾಯಂಯೇತರ ಕಾರ್ಮಿಕರ ಖಾಯಂಗೆ ಪ್ರತ್ಯೇಕ ಶಾಸನ ರೂಪಿಸಬೇಕೆಂದು ಒತ್ತಾಯಿಸಿದರು.ಮೆರವಣಿಗೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರುಗಳಾದ ರಂಗಧಮಯ್ಯ, ಅನುಸೂಯ, ತುಮಕೂರು ಜಿಲ್ಲಾ ಬೀಡಿ ಕಾರ್ಮಿಕ ಸಂಘದ ಅಬ್ದುಲ್ ಮುನ್ನಫ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪುಷ್ಪ, ಶಿವಗಂಗಮ್ಮ, ಗ್ರಾಮಪಂಚಾಯಿತಿ ನೌಕರರ ಸಂಘದ ನಾಗೇಶ್, ಕಟ್ಟಡ ಕಾರ್ಮಿಕ ಸಂಘಟನೆಯ ಶಂಕ್ರಣ್ಣ, ಹಮಾಲಿ ಕಾರ್ಮಿಕ ಸಂಘಟನೆಯ ನಾಗರಾಜು, ಡಿಸಾ ಇಂಡಿಯಾ ಪೈ.ಲಿ ಕಾರ್ಮಿಕ ಸಂಘದ ಷಣುಖಪ್ಪ, ಕರ್ನ ಅಬರ್ಸ್ ಕಾರ್ಮಿಕ ಸಂಘದ ಮಂಜುನಾಥ್, ಚೇತನ್, ಅನಂದ್, ನಿಖಿತ, ಬಿಲ್ಡ್ ಟೇಕ್ ಕಾರ್ಮಿಕ ಸಂಘದ ಮಧುಸೂಧನ್, ಎಂ.ಹೆಚ್.ಐ.ಎನ್ ಕಾರ್ಮಿಕ ಸಂಘದ ಉಮೇಶ್, ಫೀಟ್ ವೇಲ್ ಕಾರ್ಮಿಕ ಸಂಘದ ರಾಮಕೃಷ್ಣಯ್ಯ, ಸಂಪತ್ ಕುಮಾರ್, ಟಿ.ಎಸ್. ಭೀಮರಾಜು, ತುಮಕೂರು ಪೌರ ಕಾರ್ಮಿಕ ಸಂಘದ ಮಂಜುನಾಥ್, ನರಸಿಂಹಮೂರ್ತಿ, ಕೆಂಪುರಾಜು, ನೀರು ಸರಬರಾಜು ಸಂಘದ ಕುಮಾರ್, ಸಿಂಧೂರ್ ಫೋರ್ಜಿಂಗ್ ಕಾರ್ಮಿಕ ಸಂಘದ ಉಮೇಶ್, ಆಸ್ಪತ್ರೆ ನೌಕರರ ಸಂಘದ ನೇತ್ರಾವತಿ, ತಾಂತ್ರಿಕೇತರರ ಸಂಘದ ಶಿವಲಿಂಗಯ್ಯ, ಮೀನಾಕ್ಷಿ ಮೀನ, ಸಿಕಾಮೋ ಇಂಡಿಯಾ ಕಾರ್ಮಿಕ ಸಂಘದ ಗಣಪತಿ, ಕುತ್ತಿಗೆ ಕಾರ್ಮಿಕ ಚಿದಾನಂದ್, ಕಸದ ವಾಹನ ಚಾಲಕರ ಸಂಘದ ಮಾರುತಿ, ಮುನಿಸಿಪಲ್ ಕಾರ್ಮಿಕ ಸಂಘದ ಪ್ರಕಾಶ್, ಅಕ್ಷರದಾಸೋಹ ನೌಕರರ ಸಂಘದ ಕೆಂಪಮ್ಮ, ಹಾಗೂ ನಾಗೇಶ್, ಅನುಸೂಯ ದವರು ಭಾಗವಹಿಸಿದ್ದರು.ಸಿಐಟಿಯು ರಾಜ್ಯ ಸರ್ಕಾರವು ಮೇಲಿನ ಎಲ್ಲ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸಬೇಕೆಂದು ಆಗ್ರಹಿಸಿದೆ.
ಎಸ್. ಐ.ಆರ್ ಖಂಡಿಸಿ ಕರ್ನಾಟಕ ಪ್ರತಿರೋಧತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಹೋರಾಟ. ಇಂದು ತುಮಕೂರಿನಲ್ಲಿ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಜನಪರ ಸಂಘಟನೆಗಳ ಒಕ್ಕೂಟದಿಂದ ಇತ್ತೀಚೆಗೆ ಮುಖ್ಯ ಚುನಾವಣಾ ಆಯೋಗ SIR ಎಂಬ ಅಸಂವಿಧಾನಿಕ ಪ್ರಜಾತಂತ್ರ ಜನವಿರೋಧಿಯಾದ ಮತದಾನ ಪರಿಷ್ಕರಣ ವಿಧಾನವನ್ನು ಜಾರಿಮಾಡ ಹೊರಟಿದೆ. ಇದು ಜನರ ಮತದಾನದ ಹಕ್ಕು ಕಿತ್ತುಕೊಳ್ಳುವ ಪ್ರಕ್ರಿಯೆಯಾಗಿರುವುದಿಂದ ಕರ್ನಾಟಕ ಪ್ರತಿರೋಧವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪರಿಸರವಾದಿಗಳಾದ ಸಿ.ಯತಿರಾಜು ಮಾತನಾಡಿ 13 ರಾಜ್ಯಗಳಲ್ಲಿ ನಡೆದಿರುವ SIR ನಿಂದ 6 ಕೋಟಿ ಜನರನ್ನು ಮತದಾನದಿಂದ ಹೊರಗಿಡಲಾಗಿದೆ. SIR ಹಿಮ್ಮೆಟಿಸದೆ ಹೋದರೆ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಜನ ಹೋರಾಟದಿಂದ ಇದನ್ನು ಆಗದಂತೆ ನೋಡಿಕೊಳ್ಳಬೇಕು. ಜನಬೆಂಬಲವಿಲ್ಲದೆ ಸರ್ಕಾರ ಅಡ್ಡ ದಾರಿಯಿಂದ ಅಧಿಕಾರ ಹಿಡಿಯ ಹೊರಟಿರುವುದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರ. ಪಿಯುಸಿಎಲ್ ಜಿಲ್ಲಾ ಅಧ್ಯಕ್ಷರಾದ ಕೆ. ದೊರೈರಾಜ್ ಮಾತನಾಡಿ ಮತದಾನ ಎಲ್ಲಾ ಜನಗಳ ಸಂವಿಧಾನಿಕ ಹಕ್ಕು ಇದನ್ನು ಕಿತ್ತುಕೊಳ್ಳಲು ಹಿಡಿದಿರುವ ಹಾದಿ SIR – SIR ಎಂಬ ಪದ ಸಂವಿಧಾನದಲ್ಲಿಯೇ ಇಲ್ಲ . ಸಾರಾಂಶ ಪರಿಷ್ಕರಣೆಗೆ SR ನಮ್ಮ ವಿರೋಧವಿಲ್ಲವೆಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ. ಹ ರಮಾಕುಮಾರಿ ಮಾತನಾಡಿ SIR ಮಾಡಿರುವವರು ಪರೀಕ್ಷಣೆ ವಿಶೇಷವಾದದ್ದು ಕೋಟ್ಯಂತರ ಜನ ನುಸುಳುಕೋರರು ಇದ್ದಾರೆ ಅವರನ್ನು ತೆಗೆಯಲು ಈ ಪ್ರಕ್ರಿಯೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಾ. ಕೆಲವರನ್ನು ಗುರುತಿಸಲು ಉಳಿದ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ಅದಕ್ಕೆ ನಾವು SIR ಅನ್ನು ವಿರೋಧಿಸುತ್ತಿದ್ದೇವೆ ಎಂದರು. ರಾಜ್ಯ ರೈತ ಸಂಘದ ಶಂಕ್ರಪ್ಪ ಮಾತನಾಡಿ ಬಿಜೆಪಿ ಮತ್ತು ಚುನಾವಣಾ ಆಯೋಗ ಸಂವಿಧಾನ ಆಶಯವನ್ನು ಬುಡಮೇಲು ಮಾಡಲು ಹೊರಟಿದೇ. SIR ಒಂದು ಮಾರಕ ಹಸ್ತ್ರ ಮತದಾನದ ಹಕ್ಕಿಗೆ ದಕ್ಕೆ ತರಲು ಬಡಪಾಯಿ ಜನರನ್ನು ದಾಖಲೆ ಕೊಡಲು ಹಿಂಸೆ ಮಾಡಿ ಅವರಿಗೆ ಇದರ ಸಹವಾಸ ಬೇಡವೆಂದು ದೂರ ಸರಿದು ಮತದಾನ ಪಟ್ಟಿಯಿಂದ ಹೊರಗಿಡುವುದು ಜನವಿರೋಧಿ ಹುನ್ನಾರವಾಗಿದೆ ಎಂದರು. CITU ಜಿಲ್ಲಾಧ್ಯಕ್ಷರಾದ ಸಯ್ಯದ್ ಮುಜೀಬ್ ಮಾತನಾಡಿ SIR ಅನ್ನು ತರಲು ಹೊರಟಿರುವವರು ಮನುವಾದಿ ಸಂವಿಧಾನದ ಪ್ರತಿಪಾದನೆಗೆ ಹೊರಟಿದ್ದಾರೆ .ಸುಪ್ರೀಂ ಕೋರ್ಟ್ ತೀರ್ಪುಗಳು ಆಳುವ ಸರ್ಕಾರಗಳ ಡಿಕ್ಟೇಷನ್ ಇದ್ದಂತೆ ಇದೆ ಇದರಿಂದ ಕೇವಲ ಒಂದು ಸಂವಿದಾಯ ಅಲ್ಲ . ಎಲ್ಲಾ ಸಮುದಾಯಗಳು ಮತಾಧಿಕಾರ ಕಳೆದುಕೊಳ್ಳುತ್ತಾರೆ, ಅದಕ್ಕೆ ನಾವೆಲ್ಲರೂ ಸೇರಿ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದರು. ಜಾಗೃತ ಕರ್ನಾಟಕದ ಆದಂ ಖಾನ್ ಮಾತನಾಡಿ ಪರಿಷ್ಕರಣೆ ಹಿಂದೆ ನಡೆಯುತ್ತಿದ್ದಂತೆ ನಡೆಯುತ್ತಿಲ್ಲ ಆದರೆ SIR ನಲ್ಲಿ ಪ್ರತಿಯೊಬ್ಬರು ಹೊಸದಾಗಿ ಸೇರುವುದಕ್ಕೆ ಎನುಮರೇಷನ್ ಫಾರಂ ಕೊಡಲು ಒತ್ತಾಯಿಸುತ್ತಿದ್ದಾರೆ. ಇದು ಎಲ್ಲಾ ಜನಸಾಮಾನ್ಯರಿಗೂ ಸಾಧ್ಯವಾಗುವಂತಹದಲ್ಲ ಇದಕ್ಕೆ ನಮ್ಮ ವಿರೋಧವಿದೆ. ಅದಕ್ಕೆ ಈ ಕರ್ನಾಟಕ ಪ್ರತಿರೋಧ ವೆಂದರು. ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಹೊರಹೋಗದಂತೆ ಮಾಡಲು ಸಹಾಯವಾಗುವ ದಾಖಲೆಗಳನ್ನು ಜನ ನೀಡಲು ಅವರಿಗೆ ಸೂಕ್ತ ಅವಧಿ ನೀಡಿ ಅವರನ್ನು ಮತ ಪಟ್ಟಿಯಲ್ಲೇ ಇರುವಂತೆ ಖಾತ್ರಿಪಡಿಸಬೇಕೆಂದರು .ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಜುದ್ದೀನ್ ಮಾತನಾಡಿ SIR ವಿರೋಧ ಪುಣ್ಯದ ಕೆಲಸ ಜನಸಾಮಾನ್ಯರು ಮತಾಧಿಕಾರ ಕಳೆದುಕೊಳ್ಳದಂತಾಗಲೂ ನಾವೆಲ್ಲ ಸೇರಿ ಹೋರಾಡ ಎಂದರು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿಕ್ ಹಿಂದ್. SDPI. ವಿಜ್ಞಾನ ಕೇಂದ್ರ. ಜನಶಕ್ತಿ. ಎದ್ದೇಳು ಕರ್ನಾಟಕ. ಜಾಗೃತ ಕರ್ನಾಟಕ. SPIM. SUSI. ನಿವೃತ್ತ ನೌಕರರ ಸಂಘ. ಸ್ಲಂ ಜನಾಂದೋಲನ. ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ. ಸಂವಿಧಾನ ಸಂರಕ್ಷಣಾ ಪಡೆ. ಮುಂತಾದ ಸಂಘಟನೆಗಳಿಂದ ಅರುಣ್. ರಾಮಕೃಷ್ಣಪ್ಪ. ಅಕ್ಕಮ್ಮ. ಇಂದಿರಮ್ಮ. AIDSO ಜಿಲ್ಲಾಧ್ಯಕ್ಷರಾದ ಕಲ್ಯಾಣಿ. ಮರಿಯಾಂಬಿ. ಪುಷ್ಪಲತಾ. ಶಿವಲಿಂಗಯ್ಯ. ಮುಂತಾದವರು ಭಾಗವಹಿಸಿದ್ದರು.
ಪ್ರಕಟಣೆಗಾಗಿ ಆತ್ಮೀಯ ಮಾಧ್ಯಮ ಮಿತ್ರರಲ್ಲಿ ನಮಸ್ಕಾರ ಮೇ 30 ನಾಳೆ ಎಸ್ಐಆರ್ ವಿರುದ್ಧ ಪ್ರಗತಿಪರ ಮತ್ತು ಜನಪರ ಸಂಘಟನೆಗಳಿಂದ ಪ್ರತಿಭಟನೆ. ಕೇಂದ್ರದ ಚುನಾವಣಾ ಆಯೋಗ ಜಾರಿಗೆ ತರಲು ಉದ್ದೇಶಿಸಿರುವ ಎಸ್ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲೆಯ ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಒಕ್ಕೂಟ ಮತ್ತು ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಮೇ 30 ನೇ ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ SIR ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು. ಪ್ರಗತಿಪರ ಚಿಂತಕರು. ಮಹಿಳಾಪರ, ರೈತಪರ ಮತ್ತು ಕಾರ್ಮಿಕರ ಪರವಾದ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಾಗರಿಕರು ಭಾಗವಹಿಸುತ್ತಿದ್ದು ಆತ್ಮೀಯ ಮಾಧ್ಯಮ ಮಿತ್ರರು. ಪ್ರಿಂಟ್ ಮಿಡಿಯ ವರದಿಗಾರರು. ಟಿವಿ ಮಾಧ್ಯಮ ಮಿತ್ರರು. ಪತ್ರಿಕಾ ವರದಿಗಾರರು.ಛಾಯಾ ಚಿತ್ರಕರು. ಸಾಮಾಜಿಕ ಜಾಲತಾಣ ಮಾಧ್ಯಮ ಮಿತ್ರರು ಹೋರಾಟಕೆ ಬಂದು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುವ ಮೂಲಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕೆಂದು ಕೋರುತ್ತೇವೆ. ವರದಿ – ಅರುಣ್
ಶೋಕ ಸೂಚನೆ..ಮಾನ್ಯ ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ ನವರು ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಪಾವಗಡ ಪಟ್ಟಣದ ಗುರುಭವನ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಯಿಂದ ತಮ್ಮ ಸ್ವಗ್ರಾಮ ಹನುಮಂತನಹಳ್ಳಿಯ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ತಮ್ಮ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ.